Friday 12 March 2021

About the freedom struggle

  MahitiVedike Com       Friday 12 March 2021

     ಸ್ಪರ್ಧಾತ್ಮಕ ಪರೀಕ್ಷೆಗಳಿಗೆ                          ತರಬೇತಿ

    ಸ್ವಾತಂತ್ರ್ಯ ಹೋರಾಟದ ಬಗ್ಗೆ


ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಯನ್ನು ವಿರೋಧಿಸಿದ ಸನ್ನಿವೇಶಗಳು ಹಲವು. ಅನೇಕ ರಾಜಪ್ರಭುತ್ವಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರ ಸ್ವಹಿತಾಸಕ್ತಿಗಾಗಿತ್ತು. 


1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಹಲವಾರು ಬದಲಾವಣೆಗಳು ಹಾಗೂ ಪರಿಣಾಮಕಾರಿ ಸುಧಾರಣೆಗಳು ಕಂಡು ಬಂದವು. ಸಾರಿಗೆ ಮತ್ತು ಸಂಪರ್ಕ, ಪತ್ರಿಕೋದ್ಯಮ, ಸಂಘಗಳ ಸ್ಥಾಪನೆ, ಆಡಳಿತ ಸುಧಾರಣೆಗಳಲ್ಲಿ ಬದಲಾವಣೆಗಳು ಕಂಡುಬಂದವು. 


ಜನರು ಅಲ್ಲಲ್ಲಿ ಸಂಘಟಿತರಾಗಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಸಂಸ್ಥೆಗಳನ್ನು ಅನೇಕ ಪ್ರಾಂತ್ಯಗಳಲ್ಲಿ ಹುಟ್ಟುಹಾಕಿದರು. 


ಲಾರ್ಡ್ ಲಿಟ್ಟನ್ ಪತ್ರಿಕೋದ್ಯಮದಲ್ಲಿ ಜನರನ್ನು ನಿಯಂತ್ರಿಸಲು 1878ರಲ್ಲಿ ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ ಒಂದೆಡೆ ಜಾರಿಗೆ ತಂದರೆ, ಮತ್ತೊಂದೆಡೆ ಲಾರ್ಡ್ ರಿಪ್ಪನ್ ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದು, ಏಕರೂಪ ಕಾನೂನು ವ್ಯವಸ್ಥೆಗೆ ದಾರಿ ಮಾಡಿಕೊಟ್ಟನು. 


ಈ ಮಸೂದೆಯನ್ನು ವಿರೋಧಿಸಿ ಭಾರತದಲ್ಲಿನ ಬ್ರಿಟಿಷರು ಸಂಘಟಿತ ಪ್ರಯತ್ನ ನಡೆಸಿ ಜಯಶೀಲರಾದರು. ದೇಶಾದಾದ್ಯಂತ ಹಲವಾರು ರೀತಿಯ ಹೋರಾಟಗಳ ಫಲವಾಗಿ ಸ್ವಾತಂತ್ರ್ಯ ಹೋರಾಟವು ಒಂದು ಸ್ವರೂಪವನ್ನು ಪಡೆಯಲು ಸಾಧ್ಯವಾಯಿತು. 


ಇನ್ನೂ ಮುಂದೆ ಸಶಸ್ತ್ರ ಹೋರಾಟಗಳು ಉದ್ಭವವಾಗಬಾರದೆಂದು ಬ್ರಿಟಿಷರು ಕಾರ್ಯತಂತ್ರವನ್ನು ರೂಪಿಸಿದರು. ಪರಿಣಾಮವಾಗಿ 1858ರ ರಾಣಿ ಮಹಾಸನ್ನದನ್ನು ಬ್ರಿಟಿಷ್ ಸರ್ಕಾರವು ಘೋಷಿಸಿ ಭಾರತೀಯರನ್ನು ಬ್ರಿಟನ್ನಿನ ಪ್ರಜೆಗಳೆಂದು ಪರಿಗಣಿಸಿತು. 


ಆ ಮೂಲಕ ಭಾರತೀಯರಿಗೆ ಅನೇಕ ಬಗೆಯ ಸವಲತ್ತುಗಳನ್ನು ನೀಡಲು ಬ್ರಿಟಿಷ್ ಸರ್ಕಾರ ಘೋಷಿಸಿತು. ನಂತರದ ಬೆಳವಣಿಗೆಯಲ್ಲಿ ಉನ್ನತ ವರ್ಗದ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಕಲಿತ ಹೊಸ ಪೀಳಿಗೆಯ ಭಾರತೀಯರು ಸಂವಿಧಾನಾತ್ಮಕವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಲು ಆರಂಭಿಸಿದರು. 


ಇವರ ಒಟ್ಟಾರೆ ಪ್ರಯತ್ನಗಳ ಪ್ರತಿಫಲವೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಗೆ ನಾಂದಿಯಾಯಿತು. 


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ರಾಮ್ ಮೋಹನ್ ರಾಯರವರ ಕಾಲದಿಂದಲೂ ಮಧ್ಯಮ ವರ್ಗದ ಭಾರತೀಯರ ಮನಸ್ಸು ಹೊಸ ಹೊಸ ಸಂದರ್ಭಗಳಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿತ್ತು. ಈ ನಿಟ್ಟಿನಲ್ಲಿ ದ?

logoblog

Thanks for reading About the freedom struggle

Previous
« Prev Post

No comments:

Post a Comment