ಮೌರ್ಯ ಸಾಮ್ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿ, [ಕ್ರಿ.ಪೋ 323-ಕ್ರಿ ಶ 185]
ಭಾರತದಲ್ಲಿ ಮೊಟ್ಟ ಮೊದಲಿಗೆ ಸಾಮ್ರಾಜ್ಯ ಕಟ್ಟಿ ಏಕತೆ ಮೂಡಿಸಿದ ಸಾಮ್ರಾಜ್ಯ= ಮೌರ್ಯ ಸಾಮ್ರಾಜ್ಯ
(TET-2014)
ನಂದ ವಂಶವನ್ನು ಕೊನೆಗಾಣಿಸಿ ಮೌರ್ಯ ಸಾಮ್ರಾಜ್ಯ ಕಟ್ಟಿದವರು= ಚಂದ್ರಗುಪ್ತ ಮೌರ್ಯ
ನಂದ ವಂಶದ ಪ್ರಥಮ ದೊರೆ= ಮಹಾಪದ್ಮನಂದ
ನಂದ ವಂಶದ ಕೊನೆಯ ದೊರೆ= ಧನ ನಂದನ
ಮೌರ್ಯ ಸಾಮ್ರಾಜ್ಯ ಸ್ಥಾಪಕ= ಚಂದ್ರಗುಪ್ತ ಮೌರ್ಯ
ಚಂದ್ರಗುಪ್ತನ ತಾಯಿ=
ಮುರಾ ದೇವಿ
ರಾಜಧಾನಿ= ಪಾಟೀಲಪುತ್ರ ( ಪ್ರಸ್ತುತ ಬಿಹಾರದ ಪಾಟ್ನಾ)
ರಾಜ್ಯ ಲಾಂಛನ= ಧರ್ಮಚಕ್ರ ಮತ್ತು ಮಯೂರ
ಮೌರ್ಯ ಸಾಮ್ರಾಜ್ಯ ಸ್ಥಪನೆ ಆಗಲು ಪ್ರಮುಖ ವ್ಯಕ್ತಿ= ಕೌಟಿಲ್ಯ
ಕೌಟಿಲ್ಯ ಗಿದ್ದ ಇತರ ಹೆಸರುಗಳು= ಚಾಣಕ್ಯ ವಿಷ್ಣುಗುಪ್ತ
ಮೌರ್ಯರ ಬಗ್ಗೆ ಇರುವ ಪ್ರಮುಖ ಆಧಾರಗಳು
1) ಕೌಟಿಲ್ಯನ= ಅರ್ಥಶಾಸ್ತ್ರ,
2) ಮೆಗಾಸ್ತನೀಸನ= ಇಂಡಿಕಾ,
3) ಅಶೋಕನ ಶಿಲಾಶಾಸನಗಳು,
4) ವಿಶಾಖದತ್ತನ= ಮುದ್ರಾರಾಕ್ಷಸ
5) ಸಿಲೋನಿನಾ ಕೃತಿಗಳಾದ= ದೀಪವಂಶ ಮತ್ತು ಮಹಾವಂಶ
ಚಂದ್ರಗುಪ್ತ ಮೌರ್ಯನು ಪಾಟಲಿಪುತ್ರ ವನ್ನು ಗೆದ್ದ ವರ್ಷ= ಕ್ರಿಪೋ 321
ಚಂದ್ರಗುಪ್ತ ನಿಂದ ಸೋತ ಸೆಲ್ಯುಕಸ್ ಚಂದ್ರಗುಪ್ತನಿಗೆ ಬಿಟ್ಟುಕೊಟ್ಟ ಪ್ರದೇಶಗಳು= ಹೇರಾತ್. ಕಂದಹಾರ ಕಾಬುಲ
ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸೆಲ್ಯೂಕಸ್ ನ ರಾಯಭಾರಿ= ಮೆಗಸ್ತನಿಸ್
ಸೌರಾಷ್ಟ್ರದಲ್ಲಿ ಸುದರ್ಶನ ಜಲಾಶಯವನ್ನು ನಿರ್ಮಿಸಿದ ಚಂದ್ರಗುಪ್ತನ ಅಧಿಕಾರಿ= ಪುಷ್ಯಗುಪ್ತ
ಚಂದ್ರಗುಪ್ತ ಮೌರ್ಯ ತನ್ನ ಗುರುವಾದ ಭದ್ರಬಾಹುವಿನೊಂದಿಗೆ ಕೊನೆಗಾಲದಲ್ಲಿ ಬಂದು ನೆಲೆಸಿ ಸಲ್ಲೇಖನ ವ್ರತ ಆಚರಿಸಿ ಮರಣ ಹೊಂದಿದ ಕರ್ನಾಟಕದ ಸ್ಥಳ= ಶ್ರವಣಬೆಳಗೊಳ
ಚಂದ್ರಗುಪ್ತನು ಅನುಸರಿಸಿದ ಧರ್ಮ= ಜೈನ ಧರ್ಮ
ಮೌರ್ಯ ಸಾಮ್ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧ ದೊರೆ= ಅಶೋಕ
ಅಶೋಕನ ತಂದೆ ಹೆಸರು= ಬಿಂದುಸಾರ
ದ್ವಿತೀಯ ಬುದ್ಧ ಎಂದು ಕರೆಯಲ್ಪಡುವ ರಾಜ= ಅಶೋಕ
ಅಶೋಕನ ಹೆಸರಾದ ದೇವನಾಂಪ್ರಿಯ ಪ್ರಿಯದರ್ಶಿ ಎಂದು ಯಾವ ಶಾಸನದಲ್ಲಿ ಕಂಡುಬಂದಿದೆ= ಮಸ್ಕಿ ಶಾಸನ ಇದನ್ನು ಚಾಲ್ಸ್ ಬೇಡನ ಎಂಬ ಬ್ರಿಟಿಷ್ ಎಂಜಿನಿಯರ್ 1915 ರಲ್ಲಿ ಸಂಶೋಧಿಸಿದರು.)
(TET-2020)
ಅಶೋಕನ ಶಾಸನಗಳನ್ನು ಪ್ರಥಮಬಾರಿಗೆ ಓದಿ ಬೆಳಕಿಗೆ ತಂದವರು= ಜೇಮ್ಸ್ ಪ್ರಿನ್ಸೆಪ್
ಅಶೋಕನನ್ನು ವಿಶ್ವದ ಗಣ್ಯ ಚಕ್ರವರ್ತಿ ಎಂದು ಕರೆದವರು= ಎಚ್.ಜೆ. ವೇಲ್ಸ್
ಅಶೋಕನ ಶಾಸನಗಳು, ಬ್ರಾಹ್ಮಿ, ಪ್ರಾಕೃತ. ಖರೋಸ್ಟೀ. ಅರಮೀಕ್. ಗ್ರೀಕಿನ್ ಭಾಷೆಗಳಲ್ಲಿ ಕಂಡುಬಂದಿವೆ,
ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು= 14
ಅಶೋಕನ ಕಾಲದ ಶಾಸನಗಳ ವಿಧಗಳು= ಬಂಡೆ ಶಾಸನಗಳು ಮತ್ತು ಸ್ತಂಭ ಶಾಸನಗಳು
ಅಶೋಕನ ಶಾಸನಗಳು ಕರ್ನಾಟಕದಲ್ಲಿ ದೊರೆತ ಸ್ಥಳಗಳು= ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ರಾಯಚೂರು, ಗುಲ್ಬರ್ಗ,
ಅಶೋಕನ ಎಲ್ಲ ಶಾಸನಗಳನ್ನು ಕೆತ್ತಿಸಿದ ಶಿಲ್ಪಿ= ಚಪ್ಪಡ
ಅಶೋಕನ ಮನ ಪರಿವರ್ತನೆ ಮಾಡಿದ ಯುದ್ಧ= ಕಳಿಂಗ ಯುದ್ಧ
ಕಳಿಂಗ ಯುದ್ಧ ನಡೆದ ವರ್ಷ=ಕ್ರಿಪೋ 261
ಕಳಿಂಗ ಯುದ್ಧದ ಬಗ್ಗೆ ತಿಳಿಸುವ ಶಾಸನ= 13ನೇ ಗೌಣ ಶಿಲಾಶಾಸನ
ಅಶೋಕನ ಸ್ವೀಕರಿಸಿದ ಧರ್ಮ= ಬೌದ್ಧಧರ್ಮ
ಅಶೋಕನ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದ ಶಾಸನ= ಭಾಬ್ರು ಶಾಸನ
ಪ್ರಜಾ ಹಿತಕ್ಕಾಗಿ ಹೆದ್ದಾರಿಗಳು ಸಾಲುಮರಗಳು ಅರವಟ್ಟಿಗೆಗಳು ವಿಶ್ರಾಂತಿ ತೋಪ, ಛತ್ರಗಳು ವ್ಯವಸ್ಥೆ ಮಾಡಿದ ದೊರೆ= ಅಶೋಕ
ಅಶೋಕನು ಧರ್ಮ ಪ್ರಚಾರಮಾಡಲು ನೇಮಿಸಿದ ಅಧಿಕಾರಿಗಳು= ಧರ್ಮಮಹಾಮಾತ್ರರು
ಅಶೋಕ ಸ್ತಂಭಗಳು ಇರುವ ಸ್ಥಳಗಳು= ಸಂಚಿ. ಸಾರಾನಾಥ
ಸಾರನಾಥದಲ್ಲಿರುವ ಅಶೋಕನ ಸ್ತಂಭವನ್ನು ಭಾರತ ಸರ್ಕಾರವು ಜನವರಿ 26, 1950 ರಂದು ರಾಷ್ಟ್ರೀಯ ಲಾಂಛನವಾಗಿ ಅಳವಡಿಸಿಕೊಂಡಿತು.
ಸಾರನಾಥ ಸ್ತೋಪದ ಕೆಳಭಾಗದಲ್ಲಿ ಮುಂಡಕ ಉಪನಿಷತ್ ಅಲ್ಲಿ ಕಂಡುಬರುವ ಸತ್ಯಮೇವ ಜಯತೆ ಎಂಬ ಹೇಳಿಕೆಯನ್ನು "ದೇವನಾಗರಿ ಲಿಪಿಯಲ್ಲಿ" ಕೆತ್ತಿಸಲಾಗಿದೆ, ಸತ್ಯಮೇವ ಜಯತೆ ಅರ್ಥ= ಸತ್ಯವು ಮಾತ್ರ ಗೆಲ್ಲುವುದು
ಭಾರತದ ಲಾಂಛನದಲ್ಲಿ ಕೆಳಭಾಗದಲ್ಲಿ ಕಂಡುಬರುವ ಪ್ರಾಣಿಗಳು= ಆನೆ, ಓಡುವ ಕುದುರೆ, ಗೂಳಿ. ಮತ್ತು ಸಿಂಹಳು
ಬೌದ್ಧ ಧರ್ಮ ಪ್ರಚಾರಕ್ಕಾಗಿ ಸಿಂಹಳಕ್ಕೆ/ ಶ್ರೀಲಂಕಾಕ್ಕೆ ಕಳಿಸಿದ ಅಶೋಕನ ಮಕ್ಕಳು= ಮಹೇಂದ್ರ ಮತ್ತು ಸಂಘಮಿತ್ರೆ
ಅಶೋಕನ ಬನವಾಸಿಗೆ ಧರ್ಮ ಪ್ರಚಾರ ಮಾಡಲು= ರಕ್ಷಿತ ನನ್ನು ಕಳುಹಿಸಿದನು
ಧರ್ಮ ಪ್ರಚಾರ ಮಾಡಲಿಕ್ಕೆ ಮೈಸೂರುಕ್ಕೆ= ಮಹದೇವನನ್ನು ಕಳುಹಿಸಿದನು
ಮೌರ್ಯರ ಕಾಲದಲ್ಲಿ ನಗರ್ ಆಡಳಿತಕ್ಕೆ ಇದ್ದ ಅಧಿಕಾರಿ=
ನಗರ ವ್ಯವಹಾರಿಕ
ಮೌರ್ಯರ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಶ್ಚಯ ಮಾಡಿದ್ದ ಅಧಿಕಾರಿ= ರಜ್ಜುಕ
ಮೌರ್ಯರ ಕಾಲದಲ್ಲಿ ವಸೂಲ್ ಆಗುತ್ತಿದ್ದ ಕಂದಾಯದ ಪ್ರಮಾಣ= ಉತ್ಪನ್ನದ ಆರನೇ ಒಂದು ಭಾಗ
ಚಾಣಕ್ಯ ನಿಂದ ನೇಮಕಗೊಂಡ ಚಂದ್ರಗುಪ್ತ ಮೌರ್ಯನ ಮಂತ್ರಿ= ಅಮತ್ಯ ರಾಕ್ಷಸ
ವಜ್ರ ಭೂಮಿಕ ನೆಂಬ ಅಧಿಕಾರಿಯ ಪ್ರಮುಖ ಕರ್ತವ್ಯ= ಬಾವಿ ರಸ್ತೆ ತೋಪುಗಳ ನಿರ್ಮಾಣ
ಧರ್ಮಮಹಾಮಾತ್ರರು ಧರ್ಮ ಪ್ರಚಾರದ ಜೊತೆಗೆ ನಿರ್ವಹಿಸುತ್ತಿದ್ದ ಮತ್ತೊಂದು ಕಾರ್ಯ= ನ್ಯಾಯಾಧೀಶರಾಗಿ
ಮೌರ್ಯರ ಕಾಲದಲ್ಲಿ ಪ್ರಾಂತ್ಯಗಳ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು= ಕುಮಾರ
ಮೌರ್ಯರ ಕಾಲದಲ್ಲಿ ರಾಜನ ಕಣ್ಣು-ಕಿವಿಗಳೆಂದು ಹೆಸರಾಗಿದೆ ಇಲಾಖೆ= ಗುಪ್ತಚರ ವಿಭಾಗ
ಮೌರ್ಯರ ಕಾಲದಲ್ಲಿ ಆಡಳಿತದ ಕೊನೆಯ ಘಟಕ= ಗ್ರಾಮ
ಆಡಳಿತ ಸಂಬಂಧಿ ಮಾರ್ಗದರ್ಶನ ನೀಡುವ ಗಣ್ಯ ಕೃತಿ ಎಂದು ಹೆಸರಾದ ಕೃತಿ= ಅರ್ಥಶಾಸ್ತ್ರ
ಚಾಣಕ್ಯನ ಪ್ರಕಾರ ರಾಜ್ಯದ ಸಪ್ತಾಂಗಗಳಲ್ಲಿ ಒಂದು ಮುಖ್ಯ ಅಂಗ= ಮಂತ್ರಿಪರಿಷತ್
ಕೌಟಿಲ್ಯನು ಅತ್ಯಂತ ಮಹತ್ವ ನೀಡಿದ ಆಡಳಿತದ ಅಂಗ/ ವ್ಯವಸ್ಥೆ= ಗೂಢಚಾರ ವ್ಯವಸ್ಥೆ
No comments:
Post a Comment