Monday 15 February 2021

Important posts in the state of Karnataka

  MahitiVedike Com       Monday 15 February 2021
 ಕರ್ನಾಟಕ ರಾಜ್ಯದ ಪ್ರಮುಖ ಹುದ್ದೆಗಳು
               👇👇👇👇👇
☘ ಕರ್ನಾಟಕದ ರಾಜ್ಯಪಾಲರು 
- *ವಾಜುಬಾಯಿ ವಾಲಾ* 

☘ ವಿಧಾನ ಸಭಾ ಸಭಾಪತಿ 
- *ವಿಶ್ವೇಶ್ವರ ಹೆಗಡೆ ಕಾಗೇರಿ*

☘ ವಿಧಾನ ಸಭಾ ಉಪಸಭಾಪತಿ
- *ಆನಂದ್ ಸಿ .ಮಾಮನಿ*

☘ ವಿಧಾನ ಪರಿಷತ್ತಿನ ಸಭಾಪತಿ
- *ಬಸವರಾಜ ಹೊರಟ್ಟಿ*

☘ ವಿಧಾನ ಪರಿಷತ್ತಿನ ಉಪಸಭಾಪತಿ
- *ಎಂ.ಕೆ ಪ್ರಾಣೇಶ್*

☘ ಮುಖ್ಯಮಂತ್ರಿ, ರಾಜ್ಯ ಹಣಕಾಸು ಸಚಿವರು, ರಾಜ ಯೋಜನಾ ಮಂಡಳಿ ಅಧ್ಯಕ್ಷರು
- *ಬಿ.ಎಸ್. ಯಡಿಯೂರಪ್ಪ*

☘ ವಿಧಾನ ಸಭೆ ವಿರೋಧ ಪಕ್ಷದ ನಾಯಕ
- *ಸಿದ್ದರಾಮಯ್ಯ*

☘ ವಿಧಾನ ಪರಿಷತ್ತಿನ ಪಕ್ಷದ ನಾಯಕ
- *ಕೆ. ಶ್ರೀನಿವಾಸ ಪೂಜಾರಿ*

☘ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
- *ಎಸ್.ಆರ್. ಪಾಟೀಲ್*

☘ ಭಾರತದ ಮೊದಲ ಕಾರ್ಮಿಕ ಚಳುವಳಿಯ ಮ್ಯೂಸಿಯಂ
- *ಕೇರಳದ ಅಳಪ್ಪುಳ* ( Alappuzha)

☘ ಭಾರತದ ಮೊದಲ ಪ್ರಿಂಟೆಕ್  ಕ್ಲಸ್ಟರ್ ಪಾರ್ಕ್ - *ರಾಮನಗರ*

☘ ನಿರುದ್ಯೋಗ ಎಂದರೆ
-  *ಕೆಲಸಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆ ಇಲ್ಲದಿರುವ ಪರಿಸ್ಥಿತಿ*

☘ ಭ್ರಷ್ಟಾಚಾರ ಎಂದರೆ 
-  *ಎಲ್ಲಾ ವಿಧಿ - ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಟಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ* 

☘ ಭ್ರಷ್ಟಾಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು 
-  *ಲೋಕಪಾಲ & ಲೋಕಾಯುಕ್ತ*

☘ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ 
-  *ಡಿ.ಎಂ.ನಂಜುಂಡಪ್ಪ ಸಮಿತಿ* 

☘ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ವಿಧಿ
- *371ಜೆ*


☘ ಕೋಮುವಾದವೆಂದರೆ 
- *ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು*.

☘ ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ 
- *ಸ್ತ್ರೀ ಶಕ್ತಿ*

☘ ಭಯೋತ್ಪಾದನೆ ಎಂದರೆ 
-  *ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ* 

☘ 21ನೇ ಶತಮಾನದಲ್ಲಿ ಭಾರತೀಯ ನಾಗರಿಕ ಸಮಾಜಕ್ಕೆ ಸವಾಲಾಗಿರುವುದು
 -  *ಕಾರ್ಪೋರೇಟ್ ತಂತ್ರಗಾರಿಕೆ*

☘ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಭಜನೆಯಾದ ವರ್ಷ 
-  *1956* 

☘ ವಿದೇಶಾಂಗ ನೀತಿ ಎಂದರೆ 
- *ಒಂದು ರಾಷ್ಟ್ರವು ಅನ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿ* 

☘ ಆಫ್ರಿಕಾದ ಗಾಂಧಿ ಎಂದು ಹೆಸರಾದವರು 
- *ನೆಲ್ಸನ್ ಮಂಡೇಲಾ*

☘ ಜಗತ್ತಿನ ಧೃವೀಕರಣದ ಸಮಯದಲ್ಲಿ ಭಾರತ 
-  *ಅಲಿಪ್ತ ನೀತಿ ಅನುಸರಿಸಿತು* 

☘ ಅಂತರರಾಷ್ಟ್ರೀಯ ಶಾಂತಿ & ಸೌಹಾರ್ದತೆಯ ಕುರಿತು ತಿಳಿಸುವ ವಿಧಿ 
-  *51 ವಿಧಿ*

☘ ಭಾರತ & ಚೀನಾದ ನಡುವೆ ಉತ್ತಮ ವ್ಯಾಪಾರ ಸಂಪರ್ಕ ಹೊಂದಿದ ಉಲ್ಲೇಖವಿರುವ ಕೃತಿ 
-  *ಕೌಟಿಲ್ಯನ ಅರ್ಥಶಾಸ್ತ್ರ*

☘ ಭಾರತ & ಚೀನಾ ಪ್ರಯತ್ನದ ಫಲವಾಗಿ 2015 ಪ್ರಾರಂಭಗೊಂಡ ಸಂಘಟನೆ
-  *BRICS* ( ಬ್ರಿಕ್ಸ್ ) 

☘ ಗೋವಾ ವಿಮೋಚನೆಗೊಂಡ ವರ್ಷ 
-  *1961* 

☘ ಭಾರತ & ರಷ್ಯಾ ನಡುವೆ 20 ವರ್ಷಗಳ ಶಾಂತಿ ಸಹಕಾರ ಮೈತ್ರಿ ಒಪ್ಪಂದವಾದ ವರ್ಷ 
-  *1971* 

☘ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲಿಸುತ್ತಿರುವ ದೇಶ
- *ರಷ್ಯಾ*

☘  ಭಾರತ & ಪಾಕಿಸ್ತಾನ ನಡುವಿನ ಬಿಕ್ಕಟ್ಟಿಗೆ ಪ್ರಮುಖ ಕಾರಣ 
-  *ಕಾಶ್ಮೀರ ಸಮಸ್ಯೆ* 

☘ 1971 ಭಾರತ - ಪಾಕಿಸ್ತಾನ ಯುದ್ಧದ ಪರಿಣಾಮ 
- *ಬಾಂಗ್ಲಾದೇಶದ ಉದಯ* 

☘ ವಿಶ್ವಸಂಸ್ಥೆ ಪ್ರಾರಂಭವಾದ ವರ್ಷ 
-  *24 ಆಕ್ಟೋಬರ 1945* 

☘ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿದ ವರ್ಷ 
- *1948 ಡಿಸೆಂಬರ್ 10*

☘  “ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು , ಹಣ ಮಾತ್ರ ಪೋಲು ಮಾಡುವುದಿಲ್ಲ . ಬದಲಾಗಿ ಕಾರ್ಮಿಕರ ಬೆವರನ್ನು , ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಯನ್ನು ವ್ಯಯಗೊಳಿಸುತ್ತದೆ ” ಈ ಹೇಳಿಕೆ ನೀಡಿದವರು 
- *ಐಸನ್ ಹೊವರ್*  

☘ ತೃತೀಯ ಜಗತ್ತು ಎಂಬ ವಿಚಾರ ಸಂಬಂಧಿಸಿದ್ದು 
-  *ಬಡರಾಷ್ಟ್ರಗಳು* 

☘ ಅಣು ಶಸ್ತ್ರಾಸ್ತ್ರಗಳ ತಯಾರಿಕಾ ಪೈಪೋಟೆಯಿಂದ ಜಗತ್ತು ಎದುರಿಸುವ ಗಂಭೀರ ಪರಿಣಾಮ 
- *ಪರಸ್ಪರ ನಿಶ್ಚಿತ ನಾಶ*

☘ 1ನೇ ಮಹಾಯುದ್ಧದ ನಂತರ ವಿಶ್ವಶಾಂತಿಗಾಗಿ ಸ್ಥಾಪಿತವಾದ ಸಂಸ್ಥೆ 
-  *ಲೀಗ್ ಆಫ್ ನೇಷನ್ಸ್* 

☘ ವಿಶ್ವಸಂಸ್ಥೆ ಸ್ಥಾಪನೆಯ ರೂವಾರಿಗಳು 
-  *ಚರ್ಚಿಲ್ , ಸ್ಟಾಲಿನ್ ಹಾಗೂ ರೂಸ್‌ವೆಲ್ಟ್*

 ☘ ವಿಶ್ವಸಂಸ್ಥೆ ಪದ ಚಾಲ್ತಿಗೆ ತಂದವರು 
-  *ಪ್ರಾಂಕ್ಲಿನ್ ಡಿ ರೂಸ್‌ವೆಲ್ಟ್*

☘ ಯುನೆಸ್ಕೋ ಸ್ಥಾಪನೆಯ ಉದ್ದೇಶ 
-  *ವಿಶ್ವದಾದ್ಯಂತ ವಿಜ್ಞಾನ , ಶಿಕ್ಷಣ , ಸಂಸ್ಕೃತಿಗಳಿಗೆ ಪ್ರೋತ್ಸಾಹ* 

☘ ಮಾನವೀಯ ದೃಷ್ಟಿಕೋನ ಹೊಂದಿದ ವಿಶ್ವಸಂಸ್ಥೆಯ ವಿಶೇಷ ಅಂಗಸಂಸ್ಥೆ 
-  *ಯುನಿಸೆಫ್* 

☘ ನೊಬೆಲ್ ಬಹುಮಾನ ಪಡೆದ ವಿಶ್ವಸಂಸ್ಥೆಯ ವಿಶೇಷ ಅಂಗ ಸಂಸ್ಥೆ 
-  *ಯುನಿಸೆಫ್* ( 1965 ) 

☘ ಯುನೆಸ್ಕೋದ ಕೇಂದ್ರ ಕಛೇರಿ ಇರುವ ಸ್ಥಳ 
-  *ಪ್ಯಾರಿಸ್* ( 1946 )

☘ ತೃತೀಯ ಆಧಾರ ಸ್ಥಂಭ ಎಂದು ಕರೆಯಲ್ಪಡುವ ಸಂಸ್ಥೆ 
-  *ವಿಶ್ವ ವ್ಯಾಪಾರ ಸಂಘ* 

☘ ದ್ವಿತೀಯ ಮಹಾಯುದ್ಧದ ಬಳಿಕ ಆರ್ಥಿಕ ಪುನಃಶ್ವೇತನಕ್ಕಾಗಿ ಸ್ಥಾಪಿಸಿದ ಸಂಸ್ಥೆ
-  *IBRD* ( ವಿಶ್ವ ಬ್ಯಾಂಕ್ ) 

☘ IBRD ಕೇಂದ್ರ ಕಛೇರಿ ಇರುವ ಸ್ಥಳ 
-  *ವಾಷಿಂಗ್ಟನ್* 

☘ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಛೇರಿ ಇರುವ ಸ್ಥಳ 
- *ಜಿನೇವಾ*

☘ ಶಿಕ್ಷಣ ಮೂಲಭೂತ ಹಕ್ಕು ಎಂದು ತಿಳಿಸುವ ಸಂವಿಧಾನದ ವಿಧಿ 
- *21ಎ*

☘ ಅಸ್ಪೃಶ್ಯತೆ ವಿರೋಧಿಸುವ ಸಂವಿಧಾನದ ವಿಧಿ  : *17*

☘ ಅಸ್ಪಶ್ಯತೆ ಅಪರಾಧಗಳ ಕಾಯ್ದೆ ಜಾರಿಗೆ ಬಂದ ವರ್ಷ
-  *1955* 

☘ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆಯಾಗಿ ತಿದ್ದುಪಡಿಯಾದ 
-  *1976*

☘ ಮೋಡಗಳ ಮೇಲೆ ರಸಾಯನಿಕಗಳನ್ನು ಸಿಂಪಡಿಸಿ ಮಳೆಯಾಗಿಸುವ ಮೋಡಬಿತ್ತನೆ 
'ವರ್ಷಧಾರೆ ' ಕಾರ್ಯಕ್ರಮ ಯಾವ ರಾಜ್ಯದಲ್ಲಿ ನಡೆಯಿತು ?
-  *ಕರ್ನಾಟಕದಲ್ಲಿ*

☘ 2017 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷವಾಕ್ಯ ಏನಾಗಿತ್ತು ? 
-  *ಪ್ರಜಾಪ್ರಭುತ್ವ ಮತ್ತು ಸಂಘರ್ಷ ಪ್ರತಿಬಂಧ*

☘ ಅಂಬೇಡ್ಕರ್‌ರವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲು ಕಾರಣ 
- *ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕ ಮತ್ತು ಮಹತ್ವದ ಪಾತ್ರ ನಿರ್ವಹಿಸಿದ್ದರಿಂದ* 

☘ ಬಾಲಕಾರ್ಮಿಕತನ ಎಂದರೆ 
-  *ಅಪ್ರಾಪ್ತ ವಯಸ್ಸಿನ ಮಕ್ಕಳ ದುಡಿಮೆ*

 ☘ ಬಾಲ ಕಾರ್ಮಿಕರು ಎಂದರೆ 
-  *ಶಾಲೆಯಿಂದ ಹೊರಗಿರುವ 14 ವರ್ಷದೊಳಗಿನ ಮಕ್ಕಳು* 

☘ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಹೇಳುವ ಸಂವಿಧಾನದ ವಿಧಿ 
-  *24 ನೇ*

☘  ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ 
-  *1986*

☘ ಕಾಣದ ಹಸಿವು ಎಂದರೆ 
-  *ಪೋಷಕಾಂಶಗಳ ಅಭಾವದಿಂದ ಉಂಟಾಗುವ ಹಸಿವು* 

☘ ಪೋಕ್ಸೋ ಕಾಯ್ದೆ ಜಾರಿಗೆ ಬಂದ ವರ್ಷ
 -  *2012* 

☘ ಪೋಕ್ಸೋ ಕಾಯಿದೆಯ ಉದ್ದೇಶ 
-  *ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು*

☘ ಹೆಣ್ಣು ಭ್ರೂಣ ಹತ್ಯೆ ಎಂದರೆ.?
- *ತಾಯಿಯ ಗರ್ಭದಲ್ಲಿ ಬೆಳೆದ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವುದು* 

☘ ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ 
- *1994*

☘ ಭಾರತದಲ್ಲಿ ಹೆಣ್ಣು ಮಕ್ಕಳ ಮರಣ ದರವು ಗಂಡು ಮಕ್ಕಳ ಮರಣ ದರಕ್ಕಿಂತ ಹೆಚ್ಚಾಗಿದೆ ಏಕೆಂದರೆ 
-  *ಆರೋಗ್ಯ ಸೌಲಭ್ಯ , ಪೌಷ್ಠಿಕ ಆಹಾರ ಕೊರತೆ*
logoblog

Thanks for reading Important posts in the state of Karnataka

Previous
« Prev Post

No comments:

Post a Comment