Tuesday 2 March 2021

* Key questions and answers on current events in upcoming competitive exams *

  MahitiVedike Com       Tuesday 2 March 2021
 *ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳ ಮೇಲೆ ಕೇಳಬಹುದಾದ ಪ್ರಮುಖ ಪ್ರಶ್ನೋತ್ತರಗಳು*
           👇👇👇👇👇👇
=====================
1) ಎಸ್ಎಂ ಕೃಷ್ಣ ರವರ ಆತ್ಮಚರಿತ್ರೆ ಹೆಸರು? 
 *ಸ್ಮೃತಿ ವಾಹಿನಿ*

2) 2019ನೇ ಸಾಲಿನ "ಬಸವ ಕೃಷಿ" ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು? 
 *ಪ್ರಕಾಶರಾವ್ ವೀರ ಮಲ್*( ತೆಲಂಗಾಣ)

3) 2020ರ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರ? 
 *ಅನುಭವ ಮಂಟಪ*

4) ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ? 
 *ತಮಿಳುನಾಡು*( ಕರ್ನಾಟಕ- ಮೂರನೇ ಸ್ಥಾನ)

5) ದೇಶದ ಮೊದಲ "ತೃತೀಯ ಲಿಂಗಿಗಳಿಗೆ" ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ? 
 *ಉತ್ತರಪ್ರದೇಶದ ಕುಶಿನಗರ*

6) ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ವಾದ ಹಿಮಾಚಲಪ್ರದೇಶದ ರೋಹ್ತಂಗ್ ಪಾಸಿಗೆ ಯಾರ ಹೆಸರು ಇಡಲಾಯಿತು? 
 *ಅಟಲ್ ಬಿಹಾರಿ ವಾಜಪೇಯಿ*

7) ಇತ್ತೀಚಿಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ? 
 *ಆಫ್ರಿಕಾದ ಚರಿತೆಯನ್ನು*

8) 2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿದೆ? 
 *ಕೊನಾರ್ಕ್*

9) ಪ್ರವಾಹ ಪೀಡಿತ ಮಡಗಾಸ್ಕರ್ ಗೆ ನೆರವು ನೀಡಿದ ಭಾರತದ ಕಾರ್ಯಚರಣೆ ಹೆಸರು? 
 *ಆಪರೇಷನ್ ವೆನಿಲ್ಲಾ*

10) ಇತ್ತೀಚಿಗೆ ಹತ್ತು ರೂಪಾಯಿಗೆ ಊಟ ನೀಡುವ "ಶಿವ ಭೋಜನ" ಯೋಜನೆಯನ್ನು ಪ್ರಾರಂಭಿಸಿದ ರಾಜ್ಯ? 
 *ಮಹಾರಾಷ್ಟ್ರ*

11) ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಯೋಜನೆಗಳ ಮೇಲ್ವಿಚಾರಣೆಗಾಗಿ ಯಾವ ಆನ್ಲೈನ್ ಪೋರ್ಟಲ್ ಪ್ರಾರಂಭಿಸಿದೆ? 
 *ಗತಿ ಪೋರ್ಟಲ್*

12) ವಿಶ್ವದ ಅತ್ಯಂತ ಮಾಲಿನ್ಯಕಾರಕ ನಗರಗಳ ಪಟ್ಟಿಯಲ್ಲಿರುವ ಭಾರತದ ನಗರಗಳು ಯಾವುವು? 
 *ಗುರುಗ್ರಾಮ ಮತ್ತು ಗಾಜಿಯಾಬಾದ್*

13) ಇತ್ತೀಚಿಗೆ ಭಾರತೀಯ ವಾಯುಸೇನೆ ಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು? 
 *ಮಿಗ್ 27*

14)2019-20ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾದವರು? 
 *ಡಾಕ್ಟರ್ ಸಿದ್ದಲಿಂಗಯ್ಯ*

15) ಪೌರತ್ವ ತಿದ್ದುಪಡಿ ಕಾಯ್ದೆ(CAA) ವಿರುದ್ಧ ನಿರ್ಣಯ ಅಂಗೀಕರಿಸಿದೆ ದೇಶದ ಮೊದಲ ಮಹಾನಗರ ಪಾಲಿಕೆ? 
 *ಹೈದರಾಬಾದ್*

16) ಇತ್ತೀಚಿಗೆ ಅಂತರಾಷ್ಟ್ರೀಯ ಗಾಂಧಿ ಪ್ರಶಸ್ತಿಗೆ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ? 
 *ಡಾಕ್ಟರ್ ಎಂ.ಎಸ್ ಧರ್ಮಶಕ್ತು*

17) ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯದ ಪ್ರಕರಣಗಳ ಇತ್ಯರ್ಥಗೊಳಿಸಲು ಆಂಧ್ರ ಸರ್ಕಾರ ಯಾವ ಹೆಸರಿನ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಣಯಿಸಿದೆ? 
 *ದಿಶಾ ಪೊಲೀಸ್ ಠಾಣೆ*

18)2020-21ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ "ಬೀಜ ಸಂರಕ್ಷಣೆಗೆ" ಮುಂದಾಗುವ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸಿನ ನೆರವು ಕಲ್ಪಿಸಲು ಯಾವ ಯೋಜನೆ ಪ್ರಕಟಿಸಲಾಗಿದೆ? 
 *ಧಾನ್ಯಲಕ್ಷ್ಮಿ ಯೋಜನೆ*

19) ಹಣದುಬ್ಬರವನ್ನು ನಿಭಾಯಿಸಲು ಯಾವ ದೇಶವು ಹೊಸ ಕರೆನ್ಸಿ ಯೊಂದಿಗೆ ತನ್ನ ಕರೆನ್ಸಿಯನ್ನು ಬದಲಾಯಿಸುತ್ತದೆ? 
 *ಇರಾನ್*

20) ಇತ್ತೀಚಿಗೆ ಮುಂಬೈ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ? 
 *ನಿಸರ್ಗ ಚಂಡಮಾರುತ*

21) 2020 ನೇ ಸಾಲಿನ "ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ" ಪಡೆದ ವಿಮಾನ ನಿಲ್ದಾಣ? 
 *ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ*

22) ಇತ್ತೀಚಿಗೆ ರಜತಮಹೋತ್ಸವ ಆಚರಿಸಿಕೊಂಡ ವಿಶ್ವವಿದ್ಯಾಲಯ? 
 *ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ*

23) ಕರ್ನಾಟಕದಲ್ಲಿ ಮನೆರೇಗಾ  ಯೋಜನೆಯಲ್ಲಿ 100 ಮಾನವ ದಿನಗಳನ್ನು ಎಷ್ಟು ದಿನಕ್ಕೆ ಹೆಚ್ಚಿಸಲಾಗಿದೆ? 
 *150 ದಿನಗಳಿಗೆ*(FDA-2021.? )

24) ದೇಶದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಕಟ್ಟಡ? 
 *"ದಿ 42"*( ಕೊಲ್ಕತ್ತಾದಲ್ಲಿ 268ಮೀಟರ್)

25) ಕರ್ನಾಟಕ ರಾಜ್ಯದ ಮೊದಲ ತೋಳ ಸಂರಕ್ಷಿತ ಅರಣ್ಯ ಎಂದು ಯಾವ ಅರಣ್ಯವನ್ನು ಘೋಷಿಸಲು ಸರ್ಕಾರ ನಿರ್ಧರಿಸಿದೆ? 
 *ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿಯ ಬಂಕಾಪುರ ಅರಣ್ಯ*

26) "ಮೇಳಾ ಖೀರ್"  ಭವಾನಿ ಉತ್ಸವ  ಯಾವ ರಾಜ್ಯದಲ್ಲಿ ಇತ್ತೀಚಿಗೆ ನಡೆಯಿತು? 
 *ಜಮ್ಮು ಮತ್ತು ಕಾಶ್ಮೀರ*

27) ಇತ್ತೀಚಿಗೆ  "ಒನ್ ಫ್ಯಾಮಿಲಿ ಒನ್ ಜಾಬ್" ಯೋಜನೆಯನ್ನು ಯಾವ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ? 
 *ಸಿಕ್ಕಿಂ*

28) 2022 ರ ಕಾಮನವೇಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ಕ್ರೀಡೆ? 
 *ಮಹಿಳಾ ಕ್ರಿಕೆಟ್*

29)2020 ರ ಜಾನಪದ ಉತ್ಸವವನ್ನು ಯಾವ ಜಿಲ್ಲೆಯಲ್ಲಿ ನಡಸಿದ್ದಾರೆ? 
 *ಬೀದರ*

30) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ? 
 *ನಾಗರ ಶೈಲಿ*
=====================

logoblog

Thanks for reading * Key questions and answers on current events in upcoming competitive exams *

Previous
« Prev Post

No comments:

Post a Comment