Tuesday, 9 March 2021

Introduction by VK Gokaka Poet

  MahitiVedike Com       Tuesday, 9 March 2021
       

                     ವಿ.ಕೃ.ಗೋಕಾಕ

 
ಪೂರ್ಣ ಹೆಸರು= ವಿನಾಯಕ ಕೃಷ್ಣ ಗೋಕಾಕ್

 ಜನನ= 9/8/1909

 ಜನನ ಸ್ಥಳ= ಧಾರವಾಡ ಜಿಲ್ಲೆಯ ಸವನೂರು

 ತಂದೆ= ಕೃಷ್ಣರಾಯ

ತಾಯಿ = ಸುಂದರಾಬಾಯಿ

 ಕಾವ್ಯನಾಮ:  " ವಿನಾಯಕ" (ನವ್ಯತೆಗೆ ಬುನಾದಿ ಹಾಕಿದವರು)

 ಮಹಾಕಾವ್ಯ= ಭಾರತ ಸಿಂಧು ರಶ್ಮಿ

 ಜ್ಞಾನಪೀಠ ಪ್ರಶಸ್ತಿ= 1990
( ಭಾರತಸಿಂಧೋರಶ್ಮಿ ಕೃತಿಗೆ

ವೃತ್ತಿ : ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ನಿಧನ : 28 ಏಪ್ರಿಲ್ 1992 (ವಯಸ್ಸು 82)

 ಕವನಸಂಕಲನಗಳು

1) ಕಲೋಪಾಸಕ, 
2) ಪಯಣ, 
3) ಹಿಗ್ಗು, 
4) ದ್ಯಾವ ಪೃಥ್ವಿ,
5) ಊರ್ಣನಾಭ, 
6) ಸಮುದ್ರ ಗೀತೆಗಳು, 
7) ಸಿಂಹಲ ಸಿಂಪೋನಿ, 
8) ನವ್ಯ ಗೀತೆಗಳು, 
9) ಉಗಮ, 
10) ಬಾಳ ದೇಗುಲದಲ್ಲಿ, 
11) ತ್ರಿವಿಕ್ರಮ ಆಕಾಶಗಂಗೆ, 
12) ಕಾಶ್ಮೀರ
13) ವಿನಾಯಕ ಸುನೀತಗಳು, 
14) ಭಾವರಾಗ,
15) ಚಿಂತನ ಪುಣ್ಯಭೂಮಿ.

 ನಾಟಕಗಳು

1) ಜನನಾಯಕ, 
2) ವಿಮರ್ಶಕ ವೈದ್ಯ, 
3) ಯುಗಾಂತರ
4) ಮುನಿದ ಮಾರಿ, 

  ಕಾದಂಬರಿಗಳು

1) ಇಜ್ಜೋಡು (SDA-2018)
2) ನರಹರಿ ಪ್ರಾಫೆಟ್ ಆಫ್ ನ್ಯೂ ಇಂಡಿಯಾ, 
3) ಸಮರಸವೆ ಜೀವನ.

 ಪ್ರವಾಸ ಕಥನಗಳು

1) ಸಮುದ್ರದ ಆಚೆಯಿಂದ.
2) ಸಮುದ್ರದ ಈಚೆಯಿಂದ, 
3) ಪಯಣಿಗ, 

 ವಿಮರ್ಶೆ

1) ಕವಿ-ಕಾವ್ಯ ಮಹೋನ್ನತಿ.
2) ನವ್ಯತೆ ಮತ್ತು ಕಾವ್ಯದ ಚಿಂತನೆ, 
3) ಆಂಗ್ಲ ಸಾಹಿತ್ಯ ನೀಡಿದ ಸ್ಫೂರ್ತಿ, 

  ಪ್ರಶಸ್ತಿ-ಪುರಸ್ಕಾರಗಳು

 ಜ್ಞಾನಪೀಠ ಪ್ರಶಸ್ತಿ --1990
(ಭಾರತಸಿಂಧುರಶ್ಮಿ )

 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-- 1960 (ದ್ವಾವಾಪೃಥಿವಿ)

 ಪದ್ಮಶ್ರೀ ಪ್ರಶಸ್ತಿ -- 1961


 ವಿಶೇಷ ಅಂಶ

 1958 ರಲ್ಲಿ ಬಳ್ಳಾರಿಯಲ್ಲಿ ನಡೆದ 40 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

  ಯು ಆರ್ ಅನಂತಮೂರ್ತಿ

 ಪೂರ್ಣ ಹೆಸರು= ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ

 ಜನನ= 21-12-1932

 ಜನನ ಸ್ಥಳ= ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಗಿ

 ತಂದೆ= ರಾಜಗೋಪಾಲಚಾರ್ಯ

 ತಾಯಿ= ಸತ್ಯಮ್ಮ( ಸತ್ಯಭಾಮ)

 ಜ್ಞಾನಪೀಠ ಪ್ರಶಸ್ತಿ= 1994 ( ಸಮಗ್ರ ಸಾಹಿತ್ಯಕ್ಕೆ)

 ಆತ್ಮಕಥನ= ಸುರಗಿ ಸುರಹೊನ್ನೆ

ನಿಧನ=  22- ಅಗಸ್ಟ್- 2014

ವೃತ್ತಿ= ಕೇರಳದ ಕೊಟ್ಟಾಯಂ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಮತ್ತು  ಮೈಸೂರು ವಿಶ್ವವಿದ್ಯಾಲಯದ ರೀಡರ್,  ಪ್ರಾಧ್ಯಾಪಕರಾಗಿದ್ದರು.

   ಕಾದಂಬರಿಗಳು

1) ಸಂಸ್ಕಾರ
2) ಭಾರತಿಪುರ
3) ದಿವ್ಯ
4) ಭವ
5) ಅವಸ್ಥೆ

     ಕಥಾಸಂಕಲನಗಳು

1) ಎಂದೆಂದೂ ಮುಗಿಯದ ಕಥೆ, 
2) ಘಟ ಸ್ರಾದ್ದಾ.
3) ಮೌನಿ, 
4) ಪ್ರಶ್ನೆ, 
5) ಆಕಾಶ ಮತ್ತು ಬೆಕ್ಕು, 
6) ಕ್ಲಿಪ್ ಜಾಯಿಂಟ್, 
7) ಸೂರ್ಯನ ಕುದುರೆ

  ನಾಟಕ

1) ಆವಾಹನೆ


  ಕವನಸಂಕಲನಗಳು

1) 15 ಪದ್ಯಗಳು, 
2) ಮಿಥುನ
3) ಅಜ್ಜನ ಹೆಗಲ ಸುಕ್ಕುಗಳು

 ವಿಮರ್ಶಾ ಕೃತಿಗಳು

1) ಪ್ರಜ್ಞೆ ಮತ್ತು ಪರಿಸರ, 
2) ಪೂರ್ವಾಪರ, 
3) ಸಮಕ್ಷಮ, 
4) ಸನ್ನಿವೇಶ, 

ಪ್ರಶಸ್ತಿ- ಪುರಸ್ಕಾರಗಳು

 ಜ್ಞಾನಪೀಠ ಪ್ರಶಸ್ತಿ= 1994  (ಸಮಗ್ರ ಸಾಹಿತ್ಯ) ಪೂರ್ವಾಪರ ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ

 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ= 1983

 ಮಾಸ್ತಿ ಪ್ರಶಸ್ತಿ= 1994

 ಪದ್ಮಭೂಷಣ ಪ್ರಶಸ್ತಿ = 1998

 ಮಹಮ್ಮದ್ ಬಶೀರ್ ಪ್ರಶಸ್ತಿ = 2011
    (ಕೇರಳದ ಪ್ರವಾಸ ಟ್ರಸ್ಟ್ನ 18ನೇ ಪ್ರಶಸ್ತಿಗೆ ಭಾಜನರಾಗಿದ್ದರು)

 ಬಸವ ಪ್ರಶಸ್ತಿ= 2012

 ವಿಶೇಷ ಅಂಶಗಳು

 1993 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

 2002ರಲ್ಲಿ ತುಮಕೂರಿನಲ್ಲಿ ನಡೆದ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

 ಕನ್ನಡದ ನವ್ಯ ಪರಂಪರೆಯ ಪ್ರಮುಖ ಲೇಖಕರಾಗಿದ್ದರು.

 ಇವರ ಬರಹಗಳಾದ : ನಾನು ಹಿಂದೂ,  ಮೀಸಲಾತಿ, ತುರ್ತುಪರಿಸ್ಥಿತಿ, ಬ್ರಾಹ್ಮಣ ಮೊದಲಾದ ವಿಷಯಗಳ ಮೇಲೆ ವೈಚಾರಿಕ ವಿವಾದಗಳು ಸೃಷ್ಟಿ ಆಗಿದ್ದವು.

 ಇವರ ಕೃತಿಗಳಾದ: ಸಂಸ್ಕಾರ, ಘಟಶ್ರಾದ್ಧ, ಅವನೇ ಮತ್ತು ಅವಸ್ಥೆ ಇವು ಚಲನಚಿತ್ರಗಳಾಗಿವೆ 
 ಈ ಚಿತ್ರಗಳಿ0ದ ಅನಂತಮೂರ್ತಿಯವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.

 2002ರಲ್ಲಿ ತುಮಕೂರಿನಲ್ಲಿ ನಡೆದ 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, 

logoblog

Thanks for reading Introduction by VK Gokaka Poet

Previous
« Prev Post

No comments:

Post a Comment