Tuesday 16 March 2021

History notes

  MahitiVedike Com       Tuesday 16 March 2021

                ಇತಿಹಾಸ ನೋಟ್ಸ್ 

  ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ 
- ಪಿಟ್ಸ್ ಇಂಡಿಯಾ ಕಾಯ್ದೆ 1784 

 ಮುಕ್ತ ವ್ಯಾಪಾರದ ಹೊಸ ಶಕೆ ಈ ಕಾಯ್ದೆಯನ್ವಯ ಆರಂಭವಾಯಿತು 
-  1813 ರ ಚಾರ್ಟರ್ ಆಕ್ಟ್

 ಬಂಗಾಳದ ಗವರ್ನರ ಈ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‌ನಾದನು 
-  1833 ರ ಚಾರ್ಟರ್ ಕಾಯ್ದೆ

 ಖಾಯಂ ಜಮೀನ್ದಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ 
-  ಜಮೀನ್ದಾರರು 

 ಖಾಯಂ ಜಮೀನ್ದಾರಿ ಪದ್ಧತಿಯನ್ವಯ ಭೂಮಾಲೀಕರಾದವರು 
-  ಜಮೀನ್ದಾರರು

 ಭಾರತದ ರೈತರು ಸಾಲದಲ್ಲೇ ಹುಟ್ಟಿ , ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು ಎಂದು ಹೇಳಿದವರು 
- ಚಾರ್ಲ್ಸ್ ಮೆಟಕಾಫ್ (TET-2020)

 ಮಹಲ್ ಪದದ ಅರ್ಥವೇನು ? 
-  ತಾಲೂಕು 

 ಮಹಲ್ವಾರಿ ಪದ್ದತಿಯನ್ನು ಪ್ರಯೋಗಿಸಿದವರು 
-  ಆರ್ . ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್

 ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು 
-  ಅಲೆಕ್ಸಾಂಡರ್ ರೀಡ್ ( 1782 )(TET-2020)

 ರೈತವಾರಿ ಪದ್ಧತಿಯನ್ನು ಮದರಾಸು , ಮೈಸೂರು ( 1801 ) ಪ್ರಾಂತ್ಯದಲ್ಲಿ ಜಾರಿಗೊಳಿಸಿದವನು 
-  ಥಾಮಸ್ ಮನ್ರೋ

 ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ
-   ರೈತವಾರಿ

 ರೈತರು ಸಾಲದ ಸುಳಿಗೆ ಸಿಲುಕಿದ್ದು ಈ ಭೂ ಕಂದಾಯ ಪದ್ದತಿಯಿಂದ 
-  ರೈತವಾರಿ

 ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಆಧಿಕಾರಿ 
-  ವಾರನ್ ಹೇಸ್ಟಿಂಗ್ಸ್ 

 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು 
- ವಾರನ್ ಹೇಸ್ಟಿಂಗ್

 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು 
-  ಜೊನಾಥನ್ ಡಂಕನ್

 ಬ್ರಿಟಿಷ್ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು 
-  ಚಾರ್ಲ್ಸ್ ಗ್ರಾಂಟ್ 

 ಬ್ರಿಟಿಷ್ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್
- ವಿಲಿಯಂ ಬೆಂಟಿಂಕ್

  ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು 
-  ಮೆಕಾಲೆ 

 ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ , ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಟಿಸುವ ಉದ್ದೇಶ ಹೊಂದಿದ ವರದಿ 
- ಮೆಕಾಲೆ 

 1857 ರಲ್ಲಿ ಕಲ್ಕತ್ತಾ , ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು 
- ಡಾಲ್ ಹೌಸಿ

 ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
-  1935 ರ ಭಾರತ ಸರರ್ಕಾದ ಕಾಯ್ದೆ

 ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ 
- 1935 ರ ಭಾರತ ಸರ್ಕಾರ ಕಾಯ್ದೆ 

 ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು , ಏಕೆ.? 
- ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು , ಬ್ರಿಟಷರಲ್ಲಿ ನಡುಕ ಹುಟ್ಟಿಸಿತು , ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು

 ಮೊದಲನೆ ಆಂಗ್ಲೋ - ಮೈಸೂರು ಯುದ್ದ ಈ ಒಪ್ಪಂದದೊಂದಿಗೆ ಕೊನೆಗೊಂಡಿತು 
-  ಮದ್ರಾಸ್ ಒಪ್ಪಂದ
 
 ಪೊರ್ಟೋನೋವೆ ಕದನದಲ್ಲಿ ( 1781 ) ಸೋತವರು
-  ಹೈದರಾಲಿ

  2ನೇ ಆಂಗ್ಲೋ - ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
- ಮಂಗಳೂರು 

 ಮೂರನೇ ಆಂಗ್ಲೋ - ಮೈಸೂರು ಯುದ್ದಕೆ ಕಾರಣ 
-  ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ 

 ಮೂರನೇ ಆಂಗ್ಲೋ - ಮೈಸೂರು ಯುದ್ಧದ ಗತಿ ಬದಲಾಗಲು ಕಾರಣ 
-  ಲಾರ್ಡ್ ಕಾರನ್‌ವಾಲೀಸ್ ಬ್ರಿಟಿಷ್ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು 

 ಮೂರನೇ ಆಂಗ್ಲೋ- ಮೈಸೂರು ಯುದ್ಧದ ಕೊನೆಗೆ ಆದ ಒಪ್ಪಂದ 
 - ಶ್ರೀರಂಗಪಟ್ಟಣ ಒಪ್ಪಂದ (civil PC-2020)

 ಮರಾಠಿಯಲ್ಲಿ ವಾಘ ಎಂದರೆ
- ಹುಲಿ

 ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣ 
-  ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು

 ದೋಂಡಿಯಾನಿಗೆ ಸಹಾಯ ಮಾಡಿದವರು 
-  ಫ್ರೆಂಚ್‌ರು

 ದೋಂಡಿಯಾನು ಹತ್ಯೆಯಾದ ಸ್ಥಳ 
- ಕೋನ್ ಗಲ್

 ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣ
-  ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು

  ಚೆನ್ನಮ್ಮ ಮರಣ ಹೊಂದಿದ ಸ್ಥಳ
 - ಬೈಲಹೊಂಗಲ

ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
- ನಂದಗಡ ( 1831 ) 

 ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ 
-  ರೈತ ಬಂಡಾಯ

  1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು 
-  ವೆಂಕಟಪ್ಪನಾಯಕ

 ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ 
- ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು

 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣ 
-  ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು 

 ಆತ್ಮೀಯ ಸಭಾ ( ಕಲ್ಕತ್ತಾ)ದ ಸ್ಥಾಪಕರು
 ರಾಜಾ ರಾಮ್ ಮೋಹನ್ ರಾಯ್

  ಭಾರತದ ಪುನರುಜ್ಜಿವನದ ಜನಕ , ಭಾರತೀಯ ರಾಷ್ಟ್ರೀಯತತೆಯ ಪ್ರವಾದಿ ಎಂದು ಕರೆಯಲ್ಪಡುವವರು
ರಾಜಾ ರಾಮ್ ಮೋಹನ್ ರಾಯ್

ಯುವಬಂಗಾಳ ಚಳವಳಿ ಆರಂಭಿಸಿದವರು 
ಹೆನ್ರಿ ವಿವಿಯನ್ ಡಿರೇಜಿಯೊ (TET-2020) 

ಅಕಾಡಮಿಕ್ ಅಸೋಸಿಯೇಷನ್ ಚರ್ಚಾ ವೇದಿಕೆ ಸ್ಥಾಪಕರು 
ಹೆನ್ರಿ ವಿವಿಯನ್ ಡಿರೇಜಿಯೊ
logoblog

Thanks for reading History notes

Previous
« Prev Post

No comments:

Post a Comment