ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ
ಸಂವಿಧಾನದ = 36 ರಿಂದ 51ರ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ತಿಳಿಸಿಕೊಡುತ್ತವೆ,
ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ "ನಾಲ್ಕನೇ" ಭಾಗದಲ್ಲಿ ಅಳವಡಿಸಲಾಗಿದೆ,
ಈ ರಾಜ್ಯ ನಿರ್ದೇಶಕ ತತ್ವಗಳನ್ನು ಐರ್ಲೆಂಡ್ ದೇಶದಿಂದ ಎರವಲು ಪಡೆಯಲಾಗಿದೆ,
ಭಾರತದ ಸಂವಿಧಾನದಲ್ಲಿ ಕಲ್ಯಾಣ ರಾಜ್ಯ ಆದರ್ಶವನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ,
1935 ರ ಭಾರತ ಸರಕಾರದ ಶಾಸನದಲ್ಲಿರುವ ಸೂಚನೆಯ ಉಪಕರಣಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಗಿದೆ,
ರಾಜ್ಯ ನಿರ್ದೇಶಕ ತತ್ವಗಳಲ್ಲಿ ಗಾಂಧಿ ತತ್ವಗಳು ಸಮಾಜವಾದಿ ತತ್ವಗಳು ಉದಾರವಾದ ತತ್ವಗಳನ್ನು ಅಳವಡಿಸಲಾಗಿದೆ,
"ಸಂವಿಧಾನದ 36ನೇ ವಿಧಿ"= ರಾಜ್ಯ ಎಂಬ ಪದ ಅರ್ಥ ನೀಡಿದೆ,
"ಸಂವಿಧಾನದ 37 ನೇ ವಿಧಿ"= ರಾಜ್ಯ ನಿರ್ದೇಶಕ ತತ್ವಗಳಲ್ಲಿ ಇರುವ ನಿಯಮಗಳನ್ನು ಸರಕಾರ ಜಾರಿ ಮಾಡದಿದ್ದರೆ ನಾವು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ,
"ಸಂವಿಧಾನದ 38 ನೇ ವಿಧಿ"= ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸುವುದು,
"ಸಂವಿಧಾನದ 39 ನೇ ವಿಧಿ"= ಸಮಾನ ಕೆಲಸಕ್ಕೆ ಸಮಾನ ವೇತನ,
" ಭಾರತ ಸಂವಿಧಾನದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಲಾಗಿದೆ,
ಭಾರತದಲ್ಲಿ 1976 ರಲ್ಲಿ "ಸಮಾನ ಕೆಲಸಕ್ಕೆ ಸಮಾನ ವೇತನ" ಕಾಯ್ದೆಯನ್ನು ಜಾರಿಗೊಳಿಸಲಾಗಿದೆ,
"ಸಂವಿಧಾನದ 40 ನೇ ವಿಧಿ"= ಪಂಚಾಯಿತಿಗಳ ಸ್ಥಾಪನೆ
"ಸಂವಿಧಾನದ 41 ನೇ ವಿಧಿ"= ಮಹಿಳೆಯರಿಗೆ, ದುರ್ಬಲರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಸಹಾಯ ಮಾಡುವುದು,
ಮಹಿಳೆಯರಿಗೆ ಸಂಬಂಧಪಟ್ಟ ಪ್ರಮುಖ ಯೋಜನೆಗಳು
1) "ಸಂಧ್ಯಾ ಸುರಕ್ಷಾ ಯೋಜನೆ" ವೃದ್ಧರಿಗೆ ಸಂಬಂಧಿಸಿದೆ.
2) "ಪ್ರಧಾನಮಂತ್ರಿ ವಯ ವಂದನ ಯೋಜನೆ"= ಹಿರಿಯ ನಾಗರಿಕರಿಗೆ ಸಂಬಂಧಿಸಿದೆ
3) "ಮೈತ್ರಿ ಯೋಜನೆ"= ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದೆ,
4) "ಮನಸ್ವಿನಿ ಯೋಜನೆ"= ವಿಧವೆಯರಿಗೆ ಸಂಬಂಧಿಸಿದೆ
"ಸಂವಿಧಾನದ 42 ನೇ ವಿಧಿ"= ಪ್ರಸೂತಿ ಸೌಲಭ್ಯ ನೀಡಲಾಗಿದೆ
" ಪ್ರಸೂತಿ ಕ್ಷೇಮಾಭಿವೃದ್ಧಿ ಕಾಯ್ದೆಯನ್ನು 1961 ರಲ್ಲಿ ಜಾರಿಗೊಳಿಸಲಾಗಿದೆ.
"ಸಂವಿಧಾನದ 43ನೇ ವಿಧಿ"= ಕನಿಷ್ಠ ಕೂಲಿ ಕಾಯ್ದೆ
" ಕನಿಷ್ಟ ಕೂಲಿ ಕಾಯಿದೆಯನ್ನು 1948 ರಲ್ಲಿ ಜಾರಿಗೊಳಿಸಲಾಗಿದೆ,
"ಸಂವಿಧಾನದ 43(A) ವಿಧಿ"= ಕಾರ್ಮಿಕರ ಸಂಘಗಳ ಸ್ಥಾಪನೆ
"ಸಂವಿಧಾನದ 44ನೇ ವಿಧಿ"= ಏಕರೂಪ ನಾಗರಿಕ ಸಹಿತೆ
( ಕಾಮನ್ ಸಿವಿಲ್ ಕೋಡ್)
"ಸಂವಿಧಾನದ 45ನೇ ವಿಧಿ"= 6 ವರ್ಷದ ಒಳಗಿನ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣ ನೀಡಬೇಕು
"ಸಂವಿಧಾನದ 46ನೇ ವಿಧಿ"= ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಸಹಾಯ ನೀಡಬೇಕು,
"ಸಂವಿಧಾನದ 47 ನೇ ವಿಧಿ"= ಮಧ್ಯಪಾನ ನಿಷೇಧ ಮತ್ತು ಮಾದಕ ವಸ್ತುಗಳ ನಿಷೇಧ ಮಾಡಬೇಕು
"ಸಂವಿಧಾನದ 48ನೇ ವಿಧಿ"= ಗೋಹತ್ಯೆಯನ್ನು ನಿಷೇಧಿಸಬೇಕು, ಅಥವಾ ಹಸು ಮತ್ತು ಕರುಗಳ ಮತ್ತು ಇತರೆ ಕರಾವಿನ ಬಾರ ಎಳೆಯುವ ದನಕರುಗಳನ್ನು ಕಡಿಯುವುದನ್ನು ನಿಷೇಧಿಸುತ್ತದೆ,
"ಸಂವಿಧಾನದ 48(A) ವಿಧಿ"= ಪರಿಸರವನ್ನು ರಕ್ಷಣೆ ಮಾಡಬೇಕು
" ಭಾರತದಲ್ಲಿ ವನ್ಯಜೀವಿಗಳ ರಕ್ಷಣಾ ಕಾಯ್ದೆಯನ್ನು 1972 ರಲ್ಲಿ ಜಾರಿಗೊಳಿಸಲಾಗಿದೆ,
"ಸಂವಿಧಾನದ 49 ನೇ ವಿಧಿ"= ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಬೇಕು
"ಸಂವಿಧಾನದ 50 ನೇ ವಿಧಿ"= ನ್ಯಾಯಾಂಗವನ್ನು ಕಾರ್ಯಾಂಗ ದಿಂದ ಪ್ರತ್ಯೇಕಿಸುವುದು
"ಸಂವಿಧಾನದ 51 ನೇ ವಿಧಿ"= ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆ ಕಾಪಾಡುವುದು
No comments:
Post a Comment