ಗಾಂಧೀಜಿ ಅವರು ಕೈಗೊಂಡ ದಂಡಿ ಉಪ್ಪಿನ ಸತ್ಯಾಗ್ರಹ ಬಗ್ಗೆ ಸಂಕ್ಷಿಪ್ತ ಮಾಹಿತಿ
ಹಿನ್ನಲೆ
ಮಾರ್ಚ್ 2, 1930ರಂದು ಉಪ್ಪಿನ ಕಾನೂನನ್ನು ಬದಲಾಯಿಸುವಂತೆ ಕೋರಿ ಅಂದಿನ ವೈಸ್ರಾಯ್, ಲಾರ್ಡ್ ಇರ್ವಿನ್ ರವರಿಗೆ ಒಂದು ಪತ್ರ ಬರೆದರು ._ _ಪತ್ರದ ಕೊನೆಯಲ್ಲಿ: "ಈ ನನ್ನ ಪತ್ರವು ತಮ್ಮ ಮನಸ್ಸನ್ನು_ _ಬದಲಾಯಿಸದಿದ್ದಲ್ಲಿ, ಈ ಮಾಹೆಯ 11ನೇ ತಾರೀಖಿನಂದು ನಾನು ನನ್ನ ಆಶ್ರಮದ ಸಹಚರರೊಂದಿಗೆ ಈ ಕಾನೂನಿನ ಉಪಬಂಧಗಳನ್ನು ನಿರ್ಲಕ್ಷ್ಯ ಮಾಡಲು ಮುಂದಾಗುತ್ತೇನೆ. ಈ ತೆರಿಗೆಯು ಬಡ ಜನರಿಗೆ ಅತ್ಯಂತ ಅನ್ಯಾಯಕಾರಿಯಾದುದು. ನಮ್ಮ ಸ್ವಾತಂತ್ರ್ಯದ ಹೋರಾಟ ಈ ರೀತಿಯ ಬಡ ಬಲ್ಲಿದರಿಗಾಗಿಯೇ ಇರುವುದರಿಂದ, ಈ ತೆರಿಗೆಯ ವಿರೋಧದಿಂದಲೆ ಇದನ್ನು ಪ್ರಾರಂಬಿಸುತ್ತೇವೆ." ವೈಸ್ರಾಯ್ರವರು ಇದಕ್ಕೆ ಉತ್ತರ ನೀಡಲಿಲ್ಲ. ಇದರಂತೆ ಮಾರ್ಚ್ 12, 1930ರಂದು ಗಾಂಧೀಜಿಯವರು 78ಮಂದಿ ಸಹ ಸತ್ಯಾಗ್ರಹಿಗಳೊಂದಿಗೆ ಸಬರಮತಿಯಿಂದ ದಾಂಡಿ ಗ್ರಾಮಕ್ಕೆ ನಡೆಯಲು ಪ್ರಾರಂಭಿಸಿದರು. ಈ ನಡಿಗೆಯ 24 ದಿನಗಳಲ್ಲಿ ಸಹಸ್ರಾರು ಸತ್ಯಾಗ್ರಹಿಗಳು ದಾರಿಯುದ್ದಕ್ಕೂ ಸೇರಿದರು. ನಾಲ್ಕು ಜಿಲ್ಲೆಗಳು ಮತ್ತು 48 ಹಳ್ಳಿಗಳ ಮೂಲಕ ಹಾಯ್ದ ಈ ನಡಿಗೆ ಏಪ್ರಿಲ್ 5ರಂದು ದಾಂಡಿ ತಲುಪಿತು._
ಗಾಂಧೀಜಿಯವರು ದಂಡಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದ ವರ್ಷ_ = ಮಾರ್ಚ್ 12,1930
_ಎಲ್ಲಿಂದ ಎಲ್ಲಿವರೆಗೆ_ = ಅಹಮದಾಬಾದಿನ ತಮ್ಮ ಸಬರಮತಿ ಆಶ್ರಮದಿಂದ ಗುಜರಾತಿ ದಂಡಿ ಯವರೆಗೆ
( 78 _ಅನುಯಾಯಿಗಳೊಂದಿಗೆ_ )
_ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ಕರ್ನಾಟಕದಿಂದ ಹೋದ ಏಕೈಕ ವ್ಯಕ್ತಿ_ = ಮೈಲಾರ ಮಹದೇವಪ್ಪ
( ಹಾವೇರಿದವರು)
_ಹಾವೇರಿ ರೈಲು ನಿಲ್ದಾಣಕ್ಕೆ_ ಮೈಲಾರ ಮಹಾದೇವಪ್ಪ ನೆಂದು ಹೆಸರಿಡಲಾಗಿದೆ.
_ಗಾಂಧೀಜಿಯವರು ಮೊದಲು ಆಯ್ಕೆ ಮಾಡಿದ ಸತ್ಯಾಗ್ರಹಿ_ = ವಿನೋಬ ಬಾವಿ
_ಗಾಂಧೀಜಿಯವರು 24 ದಿನಗಳಲ್ಲಿ 240 ಮೈಲಿ ಕ್ರಮಿಸಿ ದಂಡಿಯನ್ನು ತಲುಪಿದರು._
_ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಚಳುವಳಿಯ ಸ್ಥಳಗಳು_
ಅಂಕೋಲಾ
ಸಿರ್ಸಿ
ಸಿದ್ದಾಪುರ
ಕಾರವಾರ
ಉಡುಪಿ
ಅಂಕೋಲದಲ್ಲಿ M, P ನಾಡಕರ್ಣಿಯ ಅಧ್ಯಕ್ಷಯಲ್ಲಿ ಉಪ್ಪಿನ ಸತ್ಯಾಗ್ರಹ ಚಳುವಳಿ ನಡೆಯಿತು_
ಅಂಕೋಲಾವನ್ನು ಕರ್ನಾಟಕದ ದಂಡಿ ಎಂದು ಕರೆಯಲಾಗುತ್ತದೆ_
ದಂಡಿ ಉಪ್ಪಿನ ಸತ್ಯಾಗ್ರಹದ ಯಾತ್ರೆಯನ್ನು " ಶ್ರೀರಾಮನ ಐತಿಹಾಸಿಕ ಲಂಕಾ ಯಾತ್ರೆ ಎಂದು ಕರೆದವರು_ = ಮೋತಿಲಾಲ್ ನೆಹರು
_ದಂಡಿ ಸತ್ಯಾಗ್ರಹ ದೊಂದಿಗೆ ಆರಂಭವಾದ ಚಳುವಳಿ_ = ಕಾನೂನು ಭಂಗ ಚಳುವಳಿ
ದಂಡಿ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೋತಿಲಾಲ್ ನೆಹರು ಅವರು ತಮ್ಮ "ಆನಂದ ಭವನ ಕಟ್ಟಡವನ್ನು " ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕೊಡುಗೆಯಾಗಿ ನೀಡಿದರು._
No comments:
Post a Comment