Monday, 22 February 2021

Q&A in various competitive exams on integration of Karnataka,

  MahitiVedike Com       Monday, 22 February 2021

 *ಕರ್ನಾಟಕದ ಏಕೀಕರಣದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು*, 

1) ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಶಸ್ತ್ರಾಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವನು? ( *KAS-1999*)
 *ಕಲ್ಯಾಣಸ್ವಾಮಿ,*

2) ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಸ್ಥಾಪಿತವಾದ ಸ್ಥಳ? ( *KAS1999*)
 *ಧಾರವಾಡ*

3) ಕರ್ನಾಟಕದ ಬಾರ್ಡೋಲಿ ಎಂದು ಜನಪ್ರಿಯವಾಗಿದ್ದ ಕೇಂದ್ರ? 
 *ಅಂಕೋಲಾ*

4) ಮೈಲಾರ ಮಹದೇವಪ್ಪ ಈ ಚಳುವಳಿಯಲ್ಲಿ ಭಾಗವಹಿಸಿದ್ದರು? ( *KAS-1999*)
 *ಉಪ್ಪಿನ ಸತ್ಯಾಗ್ರಹ,*

5) ಹಿಂದಿನ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಚಳವಳಿ ಆರಂಭವಾದದ್ದು? ( *KAS-1999*)
 *1947ರಲ್ಲಿ*
 
6)19 ಜಿಲ್ಲೆಗಳಿಂದ ಕೂಡಿದ ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು? ( *KAS-1999*)
 *ನವಂಬರ್ 1, 1956*

7)1946ರಲ್ಲಿ ಕರ್ನಾಟಕದ ಏಕೀಕರಣದ ಸಮಾವೇಶ ನಡೆದ ಸ್ಥಳ? ( *KAS-2005*)
 *ಮುಂಬೈ,*

8) ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು "ಯೂನಿಟ್ ಕಾಂಗ್ರೆಸ್" ಎಂದು    ಎಕರೆಯಲಾಗಿದೆ,  ಕಾಂಗ್ರೆಸ್ ಅಧಿವೇಶನದ ಜೊತೆಜೊತೆಗೆ ನಡೆದ ಅಧಿವೇಶನ ಯಾವುದು? ( *KAS-2002*)
 *ಅಖಿಲ ಭಾರತ ಸಾಮಾಜಿಕ ಸಮ್ಮೇಳ*, 

9) ವಸಾಹತುಶಾಹಿ ಭಾರತದಲ್ಲಿ ಅರಸರ ಶ್ರೇಣಿಯಲ್ಲಿ ಮೈಸೂರು ಸಂಸ್ಥಾನದ ಸಂಸ್ಥಾನವು ಈ ರೀತಿಯದು? ( *KAS-2015*)
 *21ಬಂದೂಕು ಸಲಾಮಿನ ರಾಜ್ಯ,*

10)1930ರ ಎಪ್ರಿಲ್ ನಲ್ಲಿ ಬೆಳಗಾವಿನಲ್ಲಿ ಉಪ್ಪನ್ನು ಮಾರಿ ಉಪ್ಪಿನ ಕಾನೂನನ್ನು ಮುರಿದವರು ಯಾರು? ( *KAS-2017*)
 *ಗಂಗಾಧರರಾವ್ ದೇಶಪಾಂಡೆ*,  

11) ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕನ್ನಡಿಗ? ( *KAS-2017*)
 *ಮೈಲಾರ ಮಹದೇವಪ್ಪ,*

12) ಮೈಸೂರಿನಲ್ಲಿ ಶಾಲೆಯನ್ನು ಯಾವ ಮೊದಲ ಕ್ರೈಸ್ತ ಮಿಷನರಿ ಪ್ರಾರಂಭಿಸಿತು? 
 *ವೆಸ್ಲಿಯನ್*, 

13) ಅವನು ರಾಣಿ ಚೆನ್ನಮ್ಮನ ಸೇನಾ ದಂಡನಾಯಕನಾಗಿದ್ದು ಗೆರಿಲ್ಲ ತಂತ್ರದಿಂದ ಬ್ರಿಟಿಷರೊಡನೆ ಹೋರಾಟ ನಡೆಸಿದ್ದ ಕರ್ನಾಟಕದ ಪ್ರಸಿದ್ಧ ಸ್ವತಂತ್ರ ಹೋರಾಟಗಾರ ಯಾರು? ( *KAS-2017*)
 *ಸಂಗೊಳ್ಳಿ ರಾಯಣ್ಣ*,

14) ಸರ್ಕಾರದಡಿ ಉದ್ಯೋಗಗಳನ್ನು ಗಳಿಸಲು ಬ್ರಾಹ್ಮಣರಲ್ಲದವರನ್ನು ಪ್ರೋತ್ಸಾಹಿಸಲು ಮುಖ್ಯ ಸಮಿತಿಗಳು  ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ನೀಡಲು ಮತ್ತು ವಿಚಾರಣೆ ನಡೆಸಲು ಮೈಸೂರಿನ ಮಹಾರಾಜರು 1918ರಲ್ಲಿ ನೇಮಿಸಿದ ಸಮಿತಿ ಯಾವುದು? ( *KAS-2017*)
 *ಮಿಲ್ಲರ್ ಸಮಿತಿ,*

15) 1953 ರಲ್ಲಿನ ರಾಜ್ಯಗಳ ಪುನರ್ ರಚನಾ ಆಯೋಗವು ಇವರ ಅಧ್ಯಕ್ಷತೆ ಮತ್ತು ಸದಸ್ಯತ್ವದಲ್ಲಿ ರಚಿಸಲಾಯಿತು?  ( *KAS-2017*)
 *ಅಧ್ಯಕ್ಷರು= ಫಜಲ್ ಅಲಿ*, 
 *ಸದಸ್ಯರು= H,N,ಕುಂಜರು, ಕೆ, ಎಂ,  ಪನಿಕರ್*

16)1928ರ ಬೆಂಗಳೂರಿನ ಗಲಭೆಗಳಲ್ಲಿ ಕಂಡು ಬಂದಿರುವಂತಹ ಗಣಪತಿ ಗಲಭೆ ಮತ್ತು ಹಿಂದೂ-ಮುಸ್ಲಿಂ ಸರಣಿ ಸಂಘರ್ಷಗಳು ಬೆಂಗಳೂರು ನಗರದಲ್ಲಿ ಶಾಲೆಯ ಆವರಣದಲ್ಲಿ ಒಂದು ಗಣೇಶ ಪ್ರತಿಮೆಯ ಮೇಲೆ ಕಮಾನುಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಉಂಟಾಗಿದ್ದು ಇದನ್ನು ಮೈಸೂರಿನ ಮಹಾರಾಜರು ಖಂಡಿಸಿ ಈ ಘಟನೆಯ ಬಗ್ಗೆ ವಿಚಾರಣೆ ನಡೆಸಲು ಸಮಿತಿಯೊಂದನ್ನು ರಚಿಸಿತು ಈ ಸಮಿತಿಯ ಮುಖ್ಯಸ್ಥರು ಯಾರು? ( *KAS-2017*)
 *ಸರ್ ಎಂ ವಿಶ್ವೇಶ್ವರಯ್ಯ*

17) ಯಾವ ವರದಿಯನ್ನಾದರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತು? ( *PSI-2018*)
 *ಫಜಲ್ ಅಲಿ ಸಮಿತಿ*, 

18) ಮೈಸೂರಿನ ಅಂಬಾವಿಲಾಸ ಅರಮನೆಯನ್ನು ವಿನ್ಯಾಸಗೊಳಿಸಿದವರು? ( *PSI/ RSI-2014.2016*)
 *ಹೆನ್ರಿ ಇರ್ವಿನ್,*

19) ಜಯ ಭಾರತ ಜನನಿಯ ತನುಜಾತೆ ರಚಿಸಿದವರು? ( *PSI-2015*)
 *ಕುವೆಂಪು,*

20) ಬೆಂಗಳೂರಿನ ಕಬ್ಬನ್ ಪಾರ್ಕ್ ನಿರ್ಮಾಪಕ? ( *PSI-2015*)
 *ಜಾನ್ ವೀಡ*

21) ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟಮೊದಲ ಸಮಾಚಾರ ಪತ್ರಿಕೆ? ( *PSI-2014*)
 *ಮಂಗಳೂರು ಸಮಾಚಾರ,*

22) ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾದ ನಂದಿಬೆಟ್ಟ ಇರುವ ಜಿಲ್ಲೆ? ( *PSI-2014*)
 *ಚಿಕ್ಕಬಳ್ಳಾಪುರ*

23) ಮಹಾತ್ಮ ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ? ( *PSI-2014*)
 *ಬೆಳಗಾವಿ-1924ರಲ್ಲಿ* 

24) ಹಿಂದೂಸ್ತಾನ ಸೇವಾದಳ ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು? ( *PSI-2018*)
 *ಎನ್ ಎಸ್ ಹರ್ಡೆಕರ್,*

25) ಮೈಸೂರು ಚಲೋ ಚಳುವಳಿ ನಡೆದ ವರ್ಷ? ( *PSI-2013*)
 *1947*

26) ಕನ್ನಡದ ಧ್ವಜವನ್ನು ವಿನ್ಯಾಸ ಮಾಡಿದವರು? ( *PSI-2009*)
 *ಎಂ ರಾಮಮೂರ್ತಿ*, 

27) ನಮ್ಮ ನಾಡಿನಲ್ಲಿ ಆಶ್ವಯುಜ ಮಾಸದಲ್ಲಿ ಬರುವ ಹಬ್ಬ ಅಂದರೆ? ( *PSI-2009*)
 *ನವರಾತ್ರಿ,*

28) ಮೈಸೂರು ವಿಶ್ವವಿದ್ಯಾಲಯದ ಸ್ಥಾಪಕರು? ( *PSI-2009*)
 *4ನೇ ಶ್ರೀ ಕೃಷ್ಣರಾಜಒಡೆಯ*

29) ಧ್ವಜ ಸತ್ಯಾಗ್ರಹ ನಡೆದ ಶಿವಪುರ ಯಾವ ಜಿಲ್ಲೆಯಲ್ಲಿದೆ?   ( *PSI-2009*)
 *ಮಂಡ್ಯ*

30) ಕರ್ನಾಟಕದಲ್ಲಿ ಗಾಂಧೀಜಿ ಅತ್ಯಂತ ಹೆಚ್ಚು ಸಮಯ ತಂಗಿದ್ದ ವರ್ಷ? ( *PSI-2007*)
 *1927*

31) ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ? ( *PSI-2006*)
 *ಶಿರಾ*

32) ಕರ್ನಾಟಕ ದಂಡಿ ಎಂದು ಕರೆಯುವರು? ( *PSI-2006*)
 *ಅಂಕೋಲಾ*

33) ಮೈಸೂರು ಚಲೋ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ? ( *PSI-2005*)
 *ಜನಪ್ರತಿನಿಧಿ ಸರ್ಕಾರಕ್ಕೆ ಚಳುವಳಿ*, 

34) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಈ ಕವಿತೆಯನ್ನು ರಚಿಸಿದವರು? ( *PSI-2005*)
 *ಹುಯಿಗೋಳ್  ನಾರಾಯಣರಾವ್*

35) ಹೈದರಾಬಾದಿನ ನಿಜಾಮರ ನಿಯಂತ್ರಣದಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು ಭಾರತದ ಒಕ್ಕೂಟದಲ್ಲಿ ಸೇರಿದ್ದು? ( *PSI-2002*)
 *1948 ಸಪ್ಟಂಬರ್*

36) ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ? ( *PSI-2002*)
 *ನಂದಗಡ*

37)1924ರ ಬೆಳಗಾಂ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರು? ( *PC-2000*)
 *ಮಹಾತ್ಮ ಗಾಂಧೀಜಿ*, 

38) ಸಂಗೊಳ್ಳಿ ರಾಯಣ್ಣನಿಗೆ ಸಂಬಂಧಿಸಿದ ಸ್ಥಳ? ( *PSI-2000*)
 *ಕಿತ್ತೂರು*

39) ಕಿತ್ತೂರಾಣಿ ಚೆನ್ನಮ್ಮನ ಪತಿ ಹೆಸರು? ( *PSI-2000*)
 *ಮಲ್ಲಸರ್ಜಾ ದೇಸಾಯಿ*, 

40) ಕರ್ನಾಟಕದ ಏಕೀಕರಣ ಯಾವಾಗ ಆಯಿತು? ( *PSI-1998/2000*)
 *1956*

41) ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು? ( *PSI-2000*)
 *1973*

42) ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?  ( *1997-FDA*)
 *ಆಲೂರು ವೆಂಕಟರಾಯ,*

43) ಹಿಂದುಳಿದ ವರ್ಗದವರಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ದೊರಕಿಸಿಕೊಟ್ಟ ಮೈಸೂರಿನ ದಿವಾನರು? ( *FDA-1997*)
 *ಕಾಂತರಾಜ ಅರಸ್*

44) ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಸೋತ ಹತರಾದವರು? ( *PDO-2011*)
 *ಟಿಪ್ಪು ಸುಲ್ತಾನ್*

45)1938ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ಸಿನ ಮೊದಲ ಅಧಿವೇಶನ ಅಧ್ಯಕ್ಷರು ಯಾರಾಗಿದ್ದರು? ( *SDA-2006*)
 *ಟಿ ಸಿದ್ದಲಿಂಗಯ್ಯ*, 

45) ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ದಿಯಾದ ಸ್ಥಳ? ( *SDA-2006*)
 *ವಿದುರಾಶ್ವತ*

46) ಕರ್ನಾಟಕದಲ್ಲಿ ಮೊಟ್ಟಮೊದಲ ಟೆಲಿವಿಜನ್ ಬಂದ ಜಾಗ? ( *PC-2006*)
 *ಗುಲ್ಬರ್ಗ*

47) ರಾಷ್ಟ್ರೀಯ ಶಾಲೆಗಳ ಸ್ಥಾಪಕರು ಮತ್ತು ಸ್ಥಳ ಕೆಳಗಿರುವ ಎಲ್ಲವು  ಸರಿಯಾಗಿವೆ,( *PC-2006*
 *ಕಾರ್ನಾಡ ಸದಾಶಿವ ರಾವ್- ಮಂಗಳೂರು*

 *ದೇವಳ ಗಾವ್ಕರ್- ಗುಲ್ಬರ್ಗ*

 *ಪಂಡಿತ ತಾರಾನಾಥ್- ರಾಯಚೂರು*, 

 *ಆಲೂರು ವೆಂಕಟರಾಯ- ಧಾರವಾಡ*, 

 *ಗಂಗಾಧರ ದೇಶಪಾಂಡೆ- ಬೆಳಗಾವಿ,*

48) ಕರ್ನಾಟಕದ ಗಾಂಧಿ? ( *PC-2007*)
 *ಹರ್ಡೆಕರ್ ಮಂಜಪ್ಪ*

49) ವಿಧಾನಸೌಧ ನಿರ್ಮಿಸಿದ ಮುಖ್ಯಮಂತ್ರಿ( *PC-2011*)
 *ಕೆಂಗಲ್ ಹನುಮಂತಯ್ಯ*

50) ಕರ್ನಾಟಕ ಸೇವಾದಳ ಸ್ಥಾಪಕರು? ( *PC-2012/2013*)
 *ನಾರಾಯಣ ಸುಬ್ಬರಾಸ್  ಹರ್ಡೀಕರ್*, 

51) ಉಲ್ಲಾಳದ ರಾಣಿ ಅಬ್ಬಕ್ಕ ಕೆಳಕಂಡ ಅದರೊಂದಿಗೆ ಯುದ್ಧಮಾಡಿದಳು? ( *PC-2013*)
 *ಪೋರ್ಚುಗೀಸರು*

52) ಹಲಗಲಿ ಬೇಡರು ಕರ್ನಾಟಕದ ಯಾವ ಜಿಲ್ಲೆಗೆ ಸೇರಿದವರು? ( *PC-2015*)
 *ಬಾಗಲಕೋಟೆ*

53)1890 ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದ ಸ್ಥಳ? ( *PC-2018*)
 *ಧಾರವಾಡ,*

54) ಕರ್ನಾಟಕದ ಯಾವ ಜಿಲ್ಲೆಯು 1930 ರ ಸವಿನಯ ಕಾನೂನು ಭಂಗ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿತ್ತು? ( *PC-2018*)
 *ಉತ್ತರ ಕನ್ನಡ*

55) ಕೆ,ಆರ್,ಎಸ್  ಆಣೆಕಟ್ಟು ಯಾವ ಪ್ರಸಿದ್ಧ ಮೈಸೂರಿನ ದಿವಾನರಿಂದ  ವಿನ್ಯಾಸ ಪಟ್ಟಿತು  ( *KSRP-2018*)
 *ವಿಶ್ವೇಶ್ವರಯ್ಯ*,  

56) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅಪ್ಪಿಕೋ ಚಳವಳಿಯನ್ನು ಸಂಘಟಿಸಲು ಪಟ್ಟಿತ್ತು? ( *PU ಲೆಕ್ಚರ್-2008*)
 *ಉತ್ತರ ಕನ್ನಡ*

57) ಕನ್ನಡದ ಮೊದಲ ಪತ್ರಿಕೆ ಸಂಪಾದಕರು? ( *ವಾರ್ಡನ್-2017*)
 *ಹರ್ಮನ್ ಮೊಗ್ಲಿಂಗ್*

58) ಸ್ವತಂತ್ರ ಚಳುವಳಿಯಲ್ಲಿ ಕನ್ನಡ ಮಹಿಳೆಯರು ಹೋರಾಡಿದರು ಅವರಲ್ಲಿ ಒಬ್ಬರು ಉತ್ತರ ಕರ್ನಾಟಕಕ್ಕೆ ಸೇರಿದವರು ಅವರ ಹೆಸರು ಏನು? (  *ಗ್ರೂಪ್ ಸಿ-2016*)
 *ಲೀಲಾವತಿ ಮಾಗಡಿ*,

logoblog

Thanks for reading Q&A in various competitive exams on integration of Karnataka,

Previous
« Prev Post

1 comment: