Sunday 14 February 2021

Brief Information on Central Sahitya Akademi Award *

  MahitiVedike Com       Sunday 14 February 2021
 *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಗ್ಗೆ ಸಂಕ್ಷಿಪ್ತ ಮಾಹಿತಿ*
                    👇👇👇👇👇
"24 ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು *1954ರಲ್ಲಿ ಸ್ಥಾಪಿಸಲಾಯಿತು.*

"ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ *1955ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.*

 *ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು* ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀದಲ್ಲಾಗುತ್ತದೆ.

ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು *12 ತಿಂಗಳು ನಡೆಯುತ್ತದೆ.* ವಿಜೇತರಿಗೆ *1 ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ*. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

 *ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ* :
                   👇👇👇👇👇
1. 1955 – "ಶ್ರೀ ರಾಮಾಯಣ ದರ್ಶನಂ" – *ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ*

2. 1956 – "ಕನ್ನಡ ಸಾಹಿತ್ಯ ಚರಿತ್ರೆ" – *ರಂಗನಾಥ ಶ್ರೀನಿವಾಸ ಮುಗಳಿ*

3. 1958 – "ಅರಳು ಮರಳು" – *ದತ್ತಾತ್ರೇಯ ರಾಮಚಂದ್ರ ಬೇಂದ್ರೆ*

4. 1959 – "ಯಕ್ಷಗಾನ ಬಯಲಾಟ" – *ಕೆ.ಶಿವರಾಮ ಕಾರಂತ*

5. 1960 – "ದ್ಯಾವಾ ಪೃಥಿವಿ" – *ವಿ.ಕೃ.ಗೋಕಾಕ*

6. 1961 – ಬಂಗಾಳಿ ಕಾದಂಬರಿಕಾರ *ಬಂಕಿಮ ಚಂದ್ರ ಚಟರ್ಜಿ* – 
ಎ.ಆರ್.ಕೃಷ್ಣಶಾಸ್ತ್ರಿ

7. 1962 – "ಮಹಾಕ್ಷತ್ರಿಯ" – *ದೇವುಡು ನರಸಿಂಹಶಾಸ್ತ್ರಿ*

8. 1964 – "ಕ್ರಾಂತಿ ಕಲ್ಯಾಣ" – *ಬಿ. ಪುಟ್ಟಸ್ವಾಮಯ್ಯ*

9. 1965 – "ರಂಗ ಬಿನ್ನಪ"  *ಎಸ್.ವಿ.ರಂಗಣ್*

10. 1966 – "ಹಂಸ ದಮಯಂತಿ ಮತ್ತು ಇತರ ರೂಪಕಗಳು"  – *ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್*

11. 1967 – ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ *ಡಿ.ವಿ.ಜಿ.*

12. 1968 – "ಸಣ್ಣ ಕತೆಗಳು" (12-13) – *ಮಾಸ್ತಿ ವೆಂಕಟೇಶ ಅಯ್ಯಂಗಾರ್*

13. 1969 – "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" – *ಹೆಚ್. ತಿಪ್ಪೇರುದ್ರಸ್ವಾಮಿ*

14. 1970 – "ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ" – *ಎಸ್.ಬಿ.ಜೋಷಿ*

15. 1971 – "ಕಾಳಿದಾಸ" – *ಆದ್ಯ ರಂಗಾಚಾರ್ಯ*

16. 1972 – "ಶೂನ್ಯ ಸಂಪಾದನೆಯ ಪರಾಮರ್ಶೆ' – *ಎಸ್.ಎಸ್.ಭೂಸನೂರಮಠ*

17. 1973 – "ಅರಲು ಬರಲು"  – *ವಿ. ಸೀತಾರಾಮಯ್ಯ*

18. 1974 – "ವರ್ಧಮಾನ " – *ಗೋಪಾಲಕೃಷ್ಣ ಅಡಿಗ*

19. 1975 – "ದಾಟು"  – *ಎಸ್.ಎಲ್.ಭೈರಪ್ಪ*

20. 1976 – "ಮನ ಮಂಥನ"  – *ಎಂ. ಶಿವರಾಂ*

21. 1977 – "ತೆರೆದ ಬಾಗಿಲು"  – *ಕೆ.ಎಸ್.ನರಸಿಂಹಸ್ವಾಮಿ*

22. 1978 – "ಹಸಿರು ಹೊನ್ನು" – *ಬಿ.ಜಿ.ಎಲ್.ಸ್ವಾಮಿ*

23. 1979 – ಚಿ"ತ್ರಗಳು ಪತ್ರಗಳು" – *ಎ.ಎನ್.ಮೂರ್ತಿರಾವ್*

24. 1980 – "ಅಮೆರಿಕದಲ್ಲಿ ಗೊರೂರು"  – *ಗೊರೂರು ರಾಮಸ್ವಾಮಿ ಅಯ್ಯಂಗಾರ್*

25. 1981 – "ಜೀವ ಧ್ವನಿ"  – *ಚನ್ನವೀರ ಕಣವಿ*

26. 1982 – "ವೈಶಾಖ"  – *ಚದುರಂಗ*

27. 1983 – "ಕಥೆಯಾದಳು ಹುಡುಗಿ " – *ಯಶವಂತ ಚಿತ್ತಾಲ*

28. 1984 – "ಕಾವ್ಯಾರ್ಥ ಚಿಂತನ"  – *ಜಿ.ಎಸ್.ಶಿವರುದ್ರಪ್ಪ*

29. 1985 – "ದುರ್ಗಾಸ್ತಮಾನ"  – *ತ.ರಾ.ಸು.*

30. 1986 – "ಬಂಡಾಯ"  – *ವ್ಯಾಸರಾಯ ಬಲ್ಲಾಳ್*

31. 1987 – "ಚಿದಂಬರ ರಹಸ್ಯ" – *ಕೆ.ಪಿ.ಪೂರ್ಣಚಂದ್ರ ರಹಸ್ಯ*

32. 1988 – "ಅವಧೇಶ್ವರಿ"  – *ಶಂಕರ ಮೊಕಾಶಿ ಪುಣೇಕರ್*

33. 1989 – "ಸಂಪ್ರತಿ" – *ಹಾ.ಮಾ.ನಾಯಕ*

34. 1990 – "ಕುಸುಮ ಬಾಲೆ"  – *ದೇವನೂರ ಮಹಾದೇವ*

35. 1991 – "ಸಿರಿ ಸಂಪಿಗೆ"  – *ಚಂದ್ರಶೇಖರ ಕಂಬಾರ*

36. 1992 – "ಬಕುಳದ ಹೂವುಗಳು" – *ಎಸ್.ಆರ್.ಎಕ್ಕುಂಡಿ*

37. 1993 – "ಕಲ್ಲು ಕರಗುವ ಸಮಯ"  – *ಪಿ. ಲಂಕೇಶ್*

38. 1994 – "ತಲೆ ದಂಡ" – *ಗಿರೀಶ್ ಆರ್.ಕಾರ್ನಾಡ್*

39. 1995 – "ಉರಿಯ ನಾಲಗೆ"  – *ಕೀರ್ತಿನಾಥ ಕುರ್ತಕೋಟಿ*

40. 1996 – "ಭುವನದ ಭಾಗ್ಯ"  – *ಜಿ.ಎಸ್.ಆಮೂರ್*
( ಇತ್ತೀಚಿಗೆ ಮರಣ ಹೊಂದಿದ್ದರು 2020)

41. 1997 – "ಹೊಸತು ಹೊಸತು"  – *ಎಂ. ಚಿದಾನಂದ ಮೂರ್ತಿ*

42. 1998 – "ಸಪ್ತಪದಿ" – *ಬಿ.ಸಿ.ರಾಮಚಂದ್ರ ಶರ್ಮ*

43. 1999 – "ಸಾಹಿತ್ಯ ಕಥನ" – *ಡಿ.ಆರ್.ನಾಗರಾಜ್*

44. 2000 – "ಓಂ ನಮೋ"  – *ಶಾಂತಿನಾಥ ಕುಬೇರಪ್ಪ ದೇಸಾಯಿ*

45. 2001 – "ಇಂಗ್ಲಿಷ್ ಸಾಹಿತ್ಯ ಚರಿತ್ರೆ"  – *ಎಲ್.ಎಸ್.ಶೇಷಗಿರಿರಾವ್*

46. 2002 – "ಯುಗಸಂಧ್ಯಾ"  – *ಸುಜನಾ* ( ಎಸ್.ನಾರಾಯಣ ಶೆಟ್ಟಿ)

47. 2003 – "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು"  – *ಕೆ.ವಿ.ಸುಬ್ಬಣ್ಣ*

48. 2004 – "ಬದುಕು"  – *ಗೀತಾ ನಾಗಭೂಷಣ*
 (ಇತ್ತೀಚಿಗೆ ಇವರು ಮರಣ ಹೊಂದಿದರು)

49. 2005 – "ತೇರು"  – *ರಾಘವೇಂದ್ರ ಪಾಟೀಲ*

50. 2006 – ಮಾರ್ಗ-4  – *ಎಂ.ಎಂ.ಕಲಬುರ್ಗಿ*

51. 2007 – "ಅರಮನೆ" – *ಕುಂ. ವೀರಭದ್ರಪ್ಪ*

52. 2008 – "ಹಳ್ಳ ಬಂತು ಹಳ್ಳ" – *ಶ್ರೀನಿವಾಸ ವೈದ್ಯ*

53. 2009 – "ಕ್ರೌಂಚ ಪಕ್ಷಿಗಳು" – *ವೈದೇಹಿ*

54. 2010 – "ಕತ್ತಿಯಂಚಿನ ದಾರಿ "– *ರಹಮತ್ ತರೀಕೆರೆ*

55. 2011 – "ಸ್ವಪ್ನ ಸಾರಸ್ವತ" – *ಗೋಪಾಲಕೃಷ್ಣ ಪೈ*

56. 2012-"ಮಬ್ಬಿನ ಹಾಗೆ ಕಣಿವೆಯಾಸಿ" (ಕವನ ಸಂಕಲನ) – *ಎಚ್. ಎಸ್. ಶಿವಪ್ರಕಾಶ್*

57. 2013-"ಆಖ್ಯಾನ ವ್ಯಾಖ್ಯಾನ" (ವಿಮರ್ಶಾ ಲೇಖನಗಳ ಸಂಗ್ರಹ)- *ಸಿ. ಎನ್. ರಾಮಚಂದ್ರನ್*

58. 2014-"ಉತ್ತರಾರ್ಧ" (ಪ್ರಬಂಧಗಳು) – *ಜಿ. ಎಚ್. ನಾಯಕ*

59. 2015-"ಅಕ್ಷಯ ಕಾವ್ಯ" (ಕವನ ಸಂಕಲನ) – *ಕೆ. ವಿ. ತಿರುಮಲೇಶ್*

60. 2016-"ಸ್ವಾತಂತ್ರ್ಯದ ಓಟ" (ಕಾದಂಬರಿ) – *ಬೊಳುವಾರು ಮಹಮದ್ ಕುಂಞ್*

61. 2017-"ಕಥನ ಭಾರತಿ" (ವಿಮರ್ಶೆ) – *ಟಿ.ಪಿ.ಅಶೋಕ*

62. 2018-"ಅನುಶ್ರೇಣಿ ಯಜಮಾನಿಕೆ" (ವಿಮರ್ಶೆ)- *ಕೆ. ಜಿ. ನಾಗರಾಜಪ್ಪ*

63. 2019-"ಕುದಿ ಎಸರು" (ಆತ್ಮಕಥೆ)- *ವಿಜಯಮ್ಮ*

logoblog

Thanks for reading Brief Information on Central Sahitya Akademi Award *

Previous
« Prev Post

No comments:

Post a Comment