*ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಗ್ಗೆ ಸಂಕ್ಷಿಪ್ತ ಮಾಹಿತಿ*
👇👇👇👇👇
"24 ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು *1954ರಲ್ಲಿ ಸ್ಥಾಪಿಸಲಾಯಿತು.*
"ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ *1955ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.*
*ಅಸ್ಸಾಮಿ, ಬಂಗಾಳಿ, ಬೋಡೋ, ಇಂಗ್ಲಿಷ್, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಷ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ರಾಜಸ್ಥಾನಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಹಾಗು ಉರ್ದು* ಭಾಷೆಯ ಸಾಹಿತಿಗಳಿಗೆ ಈ ಪ್ರಶಸ್ತಿ ನೀದಲ್ಲಾಗುತ್ತದೆ.
ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು *12 ತಿಂಗಳು ನಡೆಯುತ್ತದೆ.* ವಿಜೇತರಿಗೆ *1 ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ*. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
*ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ* :
👇👇👇👇👇
1. 1955 – "ಶ್ರೀ ರಾಮಾಯಣ ದರ್ಶನಂ" – *ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ*
2. 1956 – "ಕನ್ನಡ ಸಾಹಿತ್ಯ ಚರಿತ್ರೆ" – *ರಂಗನಾಥ ಶ್ರೀನಿವಾಸ ಮುಗಳಿ*
3. 1958 – "ಅರಳು ಮರಳು" – *ದತ್ತಾತ್ರೇಯ ರಾಮಚಂದ್ರ ಬೇಂದ್ರೆ*
4. 1959 – "ಯಕ್ಷಗಾನ ಬಯಲಾಟ" – *ಕೆ.ಶಿವರಾಮ ಕಾರಂತ*
5. 1960 – "ದ್ಯಾವಾ ಪೃಥಿವಿ" – *ವಿ.ಕೃ.ಗೋಕಾಕ*
6. 1961 – ಬಂಗಾಳಿ ಕಾದಂಬರಿಕಾರ *ಬಂಕಿಮ ಚಂದ್ರ ಚಟರ್ಜಿ* –
ಎ.ಆರ್.ಕೃಷ್ಣಶಾಸ್ತ್ರಿ
7. 1962 – "ಮಹಾಕ್ಷತ್ರಿಯ" – *ದೇವುಡು ನರಸಿಂಹಶಾಸ್ತ್ರಿ*
8. 1964 – "ಕ್ರಾಂತಿ ಕಲ್ಯಾಣ" – *ಬಿ. ಪುಟ್ಟಸ್ವಾಮಯ್ಯ*
9. 1965 – "ರಂಗ ಬಿನ್ನಪ" *ಎಸ್.ವಿ.ರಂಗಣ್*
10. 1966 – "ಹಂಸ ದಮಯಂತಿ ಮತ್ತು ಇತರ ರೂಪಕಗಳು" – *ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್*
11. 1967 – ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ *ಡಿ.ವಿ.ಜಿ.*
12. 1968 – "ಸಣ್ಣ ಕತೆಗಳು" (12-13) – *ಮಾಸ್ತಿ ವೆಂಕಟೇಶ ಅಯ್ಯಂಗಾರ್*
13. 1969 – "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" – *ಹೆಚ್. ತಿಪ್ಪೇರುದ್ರಸ್ವಾಮಿ*
14. 1970 – "ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ" – *ಎಸ್.ಬಿ.ಜೋಷಿ*
15. 1971 – "ಕಾಳಿದಾಸ" – *ಆದ್ಯ ರಂಗಾಚಾರ್ಯ*
16. 1972 – "ಶೂನ್ಯ ಸಂಪಾದನೆಯ ಪರಾಮರ್ಶೆ' – *ಎಸ್.ಎಸ್.ಭೂಸನೂರಮಠ*
17. 1973 – "ಅರಲು ಬರಲು" – *ವಿ. ಸೀತಾರಾಮಯ್ಯ*
18. 1974 – "ವರ್ಧಮಾನ " – *ಗೋಪಾಲಕೃಷ್ಣ ಅಡಿಗ*
19. 1975 – "ದಾಟು" – *ಎಸ್.ಎಲ್.ಭೈರಪ್ಪ*
20. 1976 – "ಮನ ಮಂಥನ" – *ಎಂ. ಶಿವರಾಂ*
21. 1977 – "ತೆರೆದ ಬಾಗಿಲು" – *ಕೆ.ಎಸ್.ನರಸಿಂಹಸ್ವಾಮಿ*
22. 1978 – "ಹಸಿರು ಹೊನ್ನು" – *ಬಿ.ಜಿ.ಎಲ್.ಸ್ವಾಮಿ*
23. 1979 – ಚಿ"ತ್ರಗಳು ಪತ್ರಗಳು" – *ಎ.ಎನ್.ಮೂರ್ತಿರಾವ್*
24. 1980 – "ಅಮೆರಿಕದಲ್ಲಿ ಗೊರೂರು" – *ಗೊರೂರು ರಾಮಸ್ವಾಮಿ ಅಯ್ಯಂಗಾರ್*
25. 1981 – "ಜೀವ ಧ್ವನಿ" – *ಚನ್ನವೀರ ಕಣವಿ*
26. 1982 – "ವೈಶಾಖ" – *ಚದುರಂಗ*
27. 1983 – "ಕಥೆಯಾದಳು ಹುಡುಗಿ " – *ಯಶವಂತ ಚಿತ್ತಾಲ*
28. 1984 – "ಕಾವ್ಯಾರ್ಥ ಚಿಂತನ" – *ಜಿ.ಎಸ್.ಶಿವರುದ್ರಪ್ಪ*
29. 1985 – "ದುರ್ಗಾಸ್ತಮಾನ" – *ತ.ರಾ.ಸು.*
30. 1986 – "ಬಂಡಾಯ" – *ವ್ಯಾಸರಾಯ ಬಲ್ಲಾಳ್*
31. 1987 – "ಚಿದಂಬರ ರಹಸ್ಯ" – *ಕೆ.ಪಿ.ಪೂರ್ಣಚಂದ್ರ ರಹಸ್ಯ*
32. 1988 – "ಅವಧೇಶ್ವರಿ" – *ಶಂಕರ ಮೊಕಾಶಿ ಪುಣೇಕರ್*
33. 1989 – "ಸಂಪ್ರತಿ" – *ಹಾ.ಮಾ.ನಾಯಕ*
34. 1990 – "ಕುಸುಮ ಬಾಲೆ" – *ದೇವನೂರ ಮಹಾದೇವ*
35. 1991 – "ಸಿರಿ ಸಂಪಿಗೆ" – *ಚಂದ್ರಶೇಖರ ಕಂಬಾರ*
36. 1992 – "ಬಕುಳದ ಹೂವುಗಳು" – *ಎಸ್.ಆರ್.ಎಕ್ಕುಂಡಿ*
37. 1993 – "ಕಲ್ಲು ಕರಗುವ ಸಮಯ" – *ಪಿ. ಲಂಕೇಶ್*
38. 1994 – "ತಲೆ ದಂಡ" – *ಗಿರೀಶ್ ಆರ್.ಕಾರ್ನಾಡ್*
39. 1995 – "ಉರಿಯ ನಾಲಗೆ" – *ಕೀರ್ತಿನಾಥ ಕುರ್ತಕೋಟಿ*
40. 1996 – "ಭುವನದ ಭಾಗ್ಯ" – *ಜಿ.ಎಸ್.ಆಮೂರ್*
( ಇತ್ತೀಚಿಗೆ ಮರಣ ಹೊಂದಿದ್ದರು 2020)
41. 1997 – "ಹೊಸತು ಹೊಸತು" – *ಎಂ. ಚಿದಾನಂದ ಮೂರ್ತಿ*
42. 1998 – "ಸಪ್ತಪದಿ" – *ಬಿ.ಸಿ.ರಾಮಚಂದ್ರ ಶರ್ಮ*
43. 1999 – "ಸಾಹಿತ್ಯ ಕಥನ" – *ಡಿ.ಆರ್.ನಾಗರಾಜ್*
44. 2000 – "ಓಂ ನಮೋ" – *ಶಾಂತಿನಾಥ ಕುಬೇರಪ್ಪ ದೇಸಾಯಿ*
45. 2001 – "ಇಂಗ್ಲಿಷ್ ಸಾಹಿತ್ಯ ಚರಿತ್ರೆ" – *ಎಲ್.ಎಸ್.ಶೇಷಗಿರಿರಾವ್*
46. 2002 – "ಯುಗಸಂಧ್ಯಾ" – *ಸುಜನಾ* ( ಎಸ್.ನಾರಾಯಣ ಶೆಟ್ಟಿ)
47. 2003 – "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" – *ಕೆ.ವಿ.ಸುಬ್ಬಣ್ಣ*
48. 2004 – "ಬದುಕು" – *ಗೀತಾ ನಾಗಭೂಷಣ*
(ಇತ್ತೀಚಿಗೆ ಇವರು ಮರಣ ಹೊಂದಿದರು)
49. 2005 – "ತೇರು" – *ರಾಘವೇಂದ್ರ ಪಾಟೀಲ*
50. 2006 – ಮಾರ್ಗ-4 – *ಎಂ.ಎಂ.ಕಲಬುರ್ಗಿ*
51. 2007 – "ಅರಮನೆ" – *ಕುಂ. ವೀರಭದ್ರಪ್ಪ*
52. 2008 – "ಹಳ್ಳ ಬಂತು ಹಳ್ಳ" – *ಶ್ರೀನಿವಾಸ ವೈದ್ಯ*
53. 2009 – "ಕ್ರೌಂಚ ಪಕ್ಷಿಗಳು" – *ವೈದೇಹಿ*
54. 2010 – "ಕತ್ತಿಯಂಚಿನ ದಾರಿ "– *ರಹಮತ್ ತರೀಕೆರೆ*
55. 2011 – "ಸ್ವಪ್ನ ಸಾರಸ್ವತ" – *ಗೋಪಾಲಕೃಷ್ಣ ಪೈ*
56. 2012-"ಮಬ್ಬಿನ ಹಾಗೆ ಕಣಿವೆಯಾಸಿ" (ಕವನ ಸಂಕಲನ) – *ಎಚ್. ಎಸ್. ಶಿವಪ್ರಕಾಶ್*
57. 2013-"ಆಖ್ಯಾನ ವ್ಯಾಖ್ಯಾನ" (ವಿಮರ್ಶಾ ಲೇಖನಗಳ ಸಂಗ್ರಹ)- *ಸಿ. ಎನ್. ರಾಮಚಂದ್ರನ್*
58. 2014-"ಉತ್ತರಾರ್ಧ" (ಪ್ರಬಂಧಗಳು) – *ಜಿ. ಎಚ್. ನಾಯಕ*
59. 2015-"ಅಕ್ಷಯ ಕಾವ್ಯ" (ಕವನ ಸಂಕಲನ) – *ಕೆ. ವಿ. ತಿರುಮಲೇಶ್*
60. 2016-"ಸ್ವಾತಂತ್ರ್ಯದ ಓಟ" (ಕಾದಂಬರಿ) – *ಬೊಳುವಾರು ಮಹಮದ್ ಕುಂಞ್*
61. 2017-"ಕಥನ ಭಾರತಿ" (ವಿಮರ್ಶೆ) – *ಟಿ.ಪಿ.ಅಶೋಕ*
62. 2018-"ಅನುಶ್ರೇಣಿ ಯಜಮಾನಿಕೆ" (ವಿಮರ್ಶೆ)- *ಕೆ. ಜಿ. ನಾಗರಾಜಪ್ಪ*
63. 2019-"ಕುದಿ ಎಸರು" (ಆತ್ಮಕಥೆ)- *ವಿಜಯಮ್ಮ*
No comments:
Post a Comment