*ದೆಹಲಿ ಸುಲ್ತಾನರ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು,*
👇👇👇👇👇👇
1) ದೆಹಲಿ ಸುಲ್ತಾನರಲ್ಲಿ ಅತ್ಯಂತ ದೀರ್ಘಾವಧಿಯಲ್ಲಿ ಆಡಳಿತ ಮಾಡಿದ ಮನೆತನ ಯಾವುದು?
*ತುಘಲಕ್ ಸಂತತಿ*(94ವರ್ಷ)
2) ದೆಹಲಿ ಸುಲ್ತಾನರ ಅತ್ಯಂತ ಕಡಿಮೆ ಅವಧಿಗೆ ಆಡಳಿತ ಮಾಡಿದ ಮನೆತನ ಯಾವುದು?
*ಖಿಲ್ಜಿ ಸಂತತಿ*(30ವರ್ಷ )
3) "ಪಟನ್" ಪಂಗಡಕ್ಕೆ ಸೇರಿರುವ ಮನೆತನ ಯಾವುದು?
*ಲೂದಿ ಸಂತತಿ*
4) ಗುಲಾಮಿ ಸಂತತಿಯ ಸ್ಥಾಪಕ ಯಾರು?
*ಕುತುಬುದ್ದಿನ್ ಐಬಕ್*
5) "ಲಾಕ್ ಬಕ್ಷ" ಬಿರುದು ಹೊಂದಿರುವ ದೆಹಲಿ ಸುಲ್ತಾನ ಯಾರು?
*ಕುತುಬುದ್ದಿನ ಐಬಕ್*
6) "ಕುತುಬಮಿನಾರಕ್ಕೆ" ಅಡಿಪಾಯ ಹಾಕಿದ ದೆಹಲಿ ಸುಲ್ತಾನ ಯಾರು?
*ಕುತುಬುದ್ದಿನ್ ಐಬಕ್*
7) ಭಾರತ ದೇಶದ ಪ್ರಥಮ ಮಸೀದಿ ಯಾದ *ಕುವತ್ ಉಲ್ ಇಸ್ಲಾಂ* ಎಂಬ ಮಸೂದೆಯನ್ನು ಕಟ್ಟಿಸಿದವರು ಯಾರು?
*ಕುತುಬುದ್ದಿನ ಐಬಕ್*
8)ಕುತುಬ್ ಮಿನಾರ್ ಎಲ್ಲಿದೆ?
*ದೆಹಲಿ*
9) ಕುತುಬ್ ಮಿನಾರ್ ಅನ್ನು ಯಾವ ಸಂತನ ಸ್ಮರಣಾರ್ಥವಾಗಿ ಕುತುಬುದ್ದಿನ ಐಬಕನು ಅಡಿಪಾಯ ಹಾಕಿದರು..
*ಕ್ವಾಜಾ ಕುತ್ಬುದ್ದೀನ್ ಭಕ್ತಿಯಾರ್ ಕಾಕಿಯ*
10) ಕುತುಬುದ್ದಿನ್ ಐಬಕ್ ನು ಯಾವ ಆಟ ಆಡುವ ಸಂದರ್ಭದಲ್ಲಿ ಮರಣಹೊಂದಿದ?
*ಕ್ರಿ,ಶ1210 ರಲ್ಲಿ ಪೋಲೋ/ ಚೌಗಾನ್ ಆಟ ಆಡುವ ಸಂದರ್ಭದಲ್ಲಿ ಕುದುರೆ ಮೇಲಿಂದ ಬಿದ್ದು ಮರಣ ಹೊಂದಿದ,*,
11)ಕುತುಬುದ್ದಿನ ಐಬಕನ ಸಮಾಧಿ ಎಲ್ಲಿದೆ?
*ಲಾಹೋರದಲ್ಲಿ ಇದೆ*
13)ದೆಹಲಿ ಸುಲ್ತಾನರ ನಿಜವಾದ ಸ್ಥಾಪಕ ಯಾರು?
*ಇಲ್ತಮಶ್*
13)ಇಲ್ತಮಶ್ ಯಾವ ಪಂಗಡಕ್ಕೆ ಸೇರಿದವನು?
*ಇಲ್ಬರಿ ಪಂಗಡಕ್ಕೆ*
14)ಯಾರ ಆಳ್ವಿಕೆಯಲ್ಲಿ ಮೊಟ್ಟಮೊದಲು ಮಂಗೋಲರು ಕಾಣಿಸಿಕೊಂಡರು?
*ಇಲ್ತಮಶ್*
15) ಭಾರತಕ್ಕೆ ಶುದ್ಧ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದ ದೆಹಲಿ ಸುಲ್ತಾನ ಯಾರು?
*ಇಲ್ತಮಶ್*
16)ಇಲ್ತಮಶನು ತನ್ನ ನಾಣ್ಯಗಳ ಮೇಲೆ ಏನೆಂದು ಮುದ್ರಿಸಿದನು?
*ಖಲೀಪನ್ ಪ್ರತಿನಿಧಿ*
17)"ನಲವತ್ತು ಸರದಾರರ ಒಕ್ಕೂಟ ಚಹಲ್ಗಾನಿ" ಯನ್ನು ನಿರ್ಮಿಸಿದ ದೆಹಲಿ ಸುಲ್ತಾನ ಯಾರು?
* ಇಲ್ತಮಶ್*
18)ಕುತುಬ್ ಮಿನಾರ್ ಕಟ್ಟಡವನ್ನು ಪೂರ್ಣಗೊಳಿಸಿದವರು ಯಾರು?
*ಇಲ್ತಮಶ್*
19)ದೆಹಲಿಯನ್ನಾಳಿದ ಮೊಟ್ಟ ಮೊದಲ ಮಹಿಳೆ ಯಾರು?
*ರಜಿಯಾ ಸುಲ್ತಾನ್*
20) ರಜಿಯಾ ಸುಲ್ತಾಳಲು ದೆಹಲಿಯನ್ನು ಎಷ್ಟು ವರ್ಷ ಆಳ್ವಿಕೆ ಮಾಡಿದಳು?
*3 ವರ್ಷ 6 ತಿಂಗಳ 6 ದಿವಸ*
21)ದೆಹಲಿ ಸುಲ್ತಾನರ/ಗುಲಾಮಿ ಸಂತತಿಯ *ಮರು ಸ್ಥಾಪಕ* ಎಂದು ಯಾರನ್ನು ಕರೆಯುತ್ತಾರೆ?
*ಗಿಯಾಸುದ್ದೀನ್ ಬಲ್ಬನ್*
22) ದೆಹಲಿ ಸುಲ್ತಾನರ ಪ್ರಥಮ "ನಾಯಿಬ್" ಯಾರು?
*ಗಿಯಾಸುದ್ದೀನ್ ಬಲ್ಬನ್*( ಸುಲ್ತಾನ್ ಅಸಮರ್ಥ ನಾಗಿದ್ದಾಗ ಅವನ ಕಾರ್ಯವನ್ನು ನಿರ್ವಹಿಸುವ ಅಧಿಕಾರಿ)
23)"ಸಿಜ್ಡ್" ಮತ್ತು "ಪೈಬೋಸ್" ಎಂಬ ಪದ್ಧತಿಯನ್ನು ಜಾರಿಗೆ ತಂದ ಸುಲ್ತಾನ್ ಯಾರು?
*ಗಿಯಾಸುದ್ದೀನ್ ಬಲ್ಬನ್*
24)"ನಲವತ್ತು ಸರದಾರರ ಒಕ್ಕೋಟ ಚಹಲ್ಗಾನಿ" ಯನ್ನು ರದ್ದು ಪಡಿಸಿದವರು ಯಾರು?
*ಗಿಯಾಸುದ್ದೀನ್ ಬಲ್ಬನ್*
25)ಮೊಟ್ಟಮೊದಲ ಬಾರಿಗೆ ಪರ್ಷಿಯನ್ ಮಾದರಿಯಲ್ಲಿ "ನವರೋಜ್ ಎಂಬ ಉತ್ಸವವನ್ನು" ಜಾರಿಗೆ ತಂದವರು ಯಾರು?
*ಗಿಯಸುದ್ದಿನ್ ಬಲ್ಬನ್*
26)ದೆಹಲಿಯಲ್ಲಿ "ಕೆಂಪು ಅರಮನೆಯನ್ನು" ಕಟ್ಟಿಸಿದವರು ಯಾರು?
*ಗಿಯಾಸುದ್ದೀನ್ ಬಲ್ಬನ್*
27) ಕುತುಬ್ ಮಿನಾರ್ ಕಟ್ಟಡವನ್ನು ರಿಪೇರಿ ಮಾಡಿದವರಾರು?
*ಗಿಯಾಸುದ್ದೀನ್ ಬಲ್ಬನ್*
28)ಮೊಟ್ಟಮೊದಲ ಬಾರಿಗೆ ಸೈನಿಕರಿಗೆ "ವೇತನ" ಕೊಡುವ ಪದ್ಧತಿಯನ್ನು ಜಾರಿಗೆ ತಂದ ದೆಹಲಿ ಸುಲ್ತಾನರು?
*ಗಿಯಾಸುದ್ದೀನ್ ಬಲ್ಬನ್*
29) ಖಿಲ್ಜಿ ಸಂತತಿಯ ಸ್ಥಾಪಕ ಯಾರು?
*ಜಲಾಲ್-ಉದ್-ದೀನ್ ಖಿಲ್ಜಿ*
30)"ನವ ಮುಸಲ್ಮಾನರು" ಎಂದರೆ ಯಾರು?
*ಮಂಗೋಲರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಭಾರತದಲ್ಲಿ ಉಳಿದರು ಇವರಿಗೆ ನವ ಮುಸ್ ಮಾಡಲೆಂದು ಕರೆಯುತ್ತಾರೆ*.
31) ತನ್ನ ಸಾಕಿಸಲುಹಿದ ಅಳಿಯನಿಂದಲೆ ಕೊಲೆಯಾದ ದೆಹಲಿ ಸುಲ್ತಾನ ಯಾರು?
*ಜಲಾಲ್-ಉದ್-ದೀನ್ ಖಿಲ್ಜಿ*
32) ಯಾರ ಪ್ರಭಾವಕ್ಕೂ ಒಳಗಾಗದೆ ಸ್ವತಂತ್ರವಾಗಿ ಆಡಳಿತ ಮಾಡಿದ ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು?
*ಅಲ್ಲಾವುದ್ದೀನ್ ಖಿಲ್ಜಿ*
33)ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರೇನು?
*ಅಲಿಗುರ್ಸಸ್ಸ್*
34)ಅಲ್ಲಾವುದ್ದೀನ್ ಖಿಲ್ಜಿಗೆ ಎಲ್ಲಿ ಕಿರೀಟಧಾರಣೆ ಆಯ್ತು?
*ದೆಹಲಿಯ ಕೆಂಪು ಅರಮನೆಯಲ್ಲಿ*
35) "ಸಿಕಂದರ್ ಇ ಸಹನಿ"/ ದ್ವಿತೀಯ ಅಲೆಕ್ಸಾಂಡರ್ ಎಂದು ಯಾರನ್ನು ಕರೆಯುತ್ತಾರೆ?
*ಅಲ್ಲಾವುದ್ದೀನ್ ಖಿಲ್ಜಿ ಗೆ*
35)"ಉತ್ತರ ಭಾರತ" ಮತ್ತು "ದಕ್ಷಿಣ ಭಾರತ" ಎಂಬ ದಂಡಯಾತ್ರೆಗಳನ್ನು ಕೈಗೊಂಡ ದೆಹಲಿ ಸುಲ್ತಾನ ಯಾರು?
*ಅಲ್ಲಾವುದ್ದೀನ್ ಖಿಲ್ಜಿ*
36)ಅಲ್ಲಾವುದ್ದೀನ್ ಖಿಲ್ಜಿಯ ಉತ್ತರ ಭಾರತ ದಂಡ ಯಾತ್ರೆ ಕಾಲಾವಧಿ?
*1298-1308*
37)ಅಲ್ಲಾವುದ್ದೀನ್ ಖಿಲ್ಜಿಯು ಉತ್ತರ ಭಾರತ ದಂಡ ಯಾತ್ರೆಗೆ ದಂಡನಾಯಕನಾಗಿ ಯಾರನ್ನು ನೇಮಿಸಿದನು,
*ಜಪಾನ್ ಖಾನ್, ನಸರತ್ ಖಾನ್, ಉಲುಘ ಖಾನ್*
38) ಅಲ್ಲಾವುದ್ದೀನ್ ಖಿಲ್ಜಿಯ "ಉತ್ತರ ಭಾರತ" ದಂಡ ಯಾತ್ರೆಯ ಮೊದಲ ದಂಡಯಾತ್ರೆ ಯಾವುದು?
*1298 ಗುಜರಾತ್*
39) "ಮಲ್ಲಿಕಾಪರ್" ನನ್ನು ಯಾವ ದಾಳಿಯ ಸಂದರ್ಭದಲ್ಲಿ ಗುಲಾಮನಾಗಿ ಕರೆಸಿದರು?
*ಗುಜರಾತ್ ದಾಳಿಯ*
40)ಮಲ್ಲಿಕಾಫರನ ಬಿರುದು ಯಾವುದು?
*ಹಜಾರ ದಿನಾರ*
41)ರಾಣಿ ಪದ್ಮಿನಿ ಯಾರ ಹೆಂಡತಿ?
*ಚಿತ್ತೋಡದ ರಾಜ ರತನ್ ಸಿಂಗನ ಹೆಂಡತಿ*
42)ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ಭಾರತ ದಂಡ ಯಾತ್ರೆ ಕಾಲಾವಧಿ?
*1307-1311*
43) ಅಲ್ಲಾವುದ್ದೀನ್ ಖಿಲ್ಜಿಯು ದಕ್ಷಿಣ ಭಾರತ ದಂಡ ಯಾತ್ರೆಗೆ ಯಾರನ್ನು ದಂಡನಾಯಕನಾಗಿ ನೇಮಿಸಿದನು?
*ಮಲ್ಲಿಕಾಪರ್ ನನ್ನು*
44)ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ಭಾರತದ ಮೊದಲ ದಂಡಯಾತ್ರೆ ಯಾವುದು?
*1307 ದೇವಗಿರಿಯ ರಾಮಚಂದ್ರನ ಮೇಲೆ,*
45)ಕುದುರೆಗಳಿಗೆ ಮುದ್ರೆ ಹಾಕುವ (ದಾಗ ) ಎಂಬ ಪದ್ಧತಿಯನ್ನು ಜಾರಿಗೆ ತಂದವರು ಯಾರು?
*ಅಲ್ಲಾವುದ್ದೀನ್ ಖಿಲ್ಜಿ*
46)ಸೈನಿಕರ ಮುಖ ಲಕ್ಷಣವನ್ನು ಬರೆದಿರುವ ಪುಸ್ತಕ ಯಾವುದು?
*ಹುಲಿಯಾ ಚಾಹರಾ*
47)ಅಲ್ಲಾವುದ್ದೀನ್ ಖಿಲ್ಜಿಯ ಪ್ರಮುಖ ಸಾಧನೆ ಯಾವುದು?
*ಮಾರುಕಟ್ಟೆ ಸುಧಾರಣೆ*
48)ಅಲ್ಲಾವುದ್ದೀನ್ ಖಿಲ್ಜಿಯು ಮಾರುಕಟ್ಟೆ ಇಲಾಖೆಯನ್ನು ಏನೆಂದು ಕರೆಯುತ್ತಿದ್ದನು?
*ದಿವಾನಿ-ಇ-ರಿಯಾಸತ್*
49)ಮಾರುಕಟ್ಟೆ ಅಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು?
*ಶಹನ್-ಐ-ಮಂಡಿ*
50)ಅಲ್ಲಾವುದ್ದೀನ್ ಖಿಲ್ಜಿಯು ಹಿಂದುಗಳ ಮೇಲೆ ಹಾಕುವ ಪದ್ಧತಿ ಯಾವುದು?
*ಜಿಜಿಯಾ*
51)ಮುಸ್ಲಿಂ ಬಾಂಧವರ ಮೇಲೆ ಹಾಕುವ ಪದ್ಧತಿ?
*ಜಕಾತ್*
52)ಭಾರತದ ಗಿಳಿ ಎಂದು ಕರೆಸಿಕೊಳ್ಳುವ ಅಮೀರ್ ಖುಸ್ರೋ ಯಾರ ಆಸ್ಥಾನದಲ್ಲಿದ್ದರು?
*ಅಲ್ಲಾವುದ್ದೀನ್ ಖಿಲ್ಜಿ*
53) "ಅಲಾಯಿ ದರ್ವಾಜ್" ಮತ್ತು "ಅಲಹಿ ಮಿನಾರ್" ಎಂಬ ಕಟ್ಟಡವನ್ನು ದೆಹಲಿಯಲ್ಲಿ ಕಟ್ಟಿಸಿದವರು ಯಾರು?
*ಅಲ್ಲಾವುದ್ದೀನ್ ಖಿಲ್ಜಿ*
54) 30ಸಾವಿರ "ನವ ಮುಸಲ್ಮಾನರನ್ನು" ಒಂದೇ ದಿನದಲ್ಲಿ ಕೊಲೆ ಮಾಡಿದ ದೆಹಲಿ ಸುಲ್ತಾನ ಯಾರು?
*ಅಲ್ಲಾವುದ್ದೀನ್ ಖಿಲ್ಜಿ*
55)ಮಲ್ಲಿಕಾಪರನಿಂದ ವಿಷಪ್ರಾಶನಕ್ಕೆ ಒಳಗಾದ ದೆಹಲಿ ಸುಲ್ತಾನರ?
*ಅಲ್ಲಾವುದ್ದೀನ್ ಖಿಲ್ಜಿ*(1316ರಲ್ಲಿ)
56)ತುಗಲಕ್ ಸಂತತಿಯ ಸ್ಥಾಪಕ ಯಾರು?
*ಗಿಯಾಸುದ್ದೀನ್ ತುಘಲಕ್*
57) ರೈತರಿಗೆ "ನೀರಾವರಿ ಸೌಲಭ್ಯವನ್ನು" ಒದಗಿಸಿಕೊಟ್ಟ ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು?
*ಗಿಯಾಸುದ್ದೀನ್ ತುಘಲಕ್*
58)"ತುಘಲಕಾಬಾದ್" ಎಂಬ ನಗರವನ್ನು ನಿರ್ಮಿಸಿದವರು?
*ಗಿಯಾಸುದ್ದೀನ್ ತುಘಲಕ್*
59)ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಮಗನಿಂದಲೇ ಕೊಲೆಯಾದ ವ್ಯಕ್ತಿ ಯಾರು?
*ಗಿಯಾಸುದ್ದೀನ್ ತುಘಲಕ್*
60)ಮಹಮದ್ ಬಿನ್ ತುಘಲಕನ ಮೂಲ ಹೆಸರೇನು?
*ಜುನಾ ಖಾನ್*
61)"ಅರೆಹುಚ್ಚ ಅರಸ" ಮತ್ತು "ಯೋಜನಾಪ ಅರಸ" ಎಂದು ಯಾರನ್ನು ಕರೆಯುತ್ತಾರೆ?
*ಮಹಮ್ಮದ್ ಬಿನ್ ತುಘಲಕ್*
62)"ದೆಹಲಿಯಿಂದ ದೇವಗಿರಿಗೆ" ರಾಜಧಾನಿಯನ್ನು ವರ್ಗಾಯಿಸಿದ ದೆಹಲಿ ಸುಲ್ತಾನ ಯಾರು?
*ಮಹಮ್ಮದ್ ಬಿನ್ ತುಘಲಕ್*
63)"ದೆಹಲಿಯಲ್ಲಿ ದೀಪವನ್ನು ಹಿಡಿದುಕೊಂಡು ಅಡ್ಡಾಡಿದರು ಒಂದು ಬೆಕ್ಕು ನಾಯಿ ಸುಳಿವು ಇರಲಿಲ್ಲ" ಎಂದು ಹೇಳಿದವರು ಯಾರು?
*ಜಿಯೋ ದಿನ ಬರ್ನಿ*
64)"ಹಣಗಾರರ ರಾಜ" ಎಂದು ಯಾರನ್ನು ಕರೆಯುತ್ತಾರೆ?
*ಮಹಮ್ಮದ್ ಬಿನ್ ತುಘಲಕ್*
(ಕರೆದವರು ಅಡ್ವರ್ಡ್ ಥಾಮಸ್)
*ಮಹಮದ್ ಬಿನ್ ತುಘಲಕನು ಜೈನ ಮುನಿ ಪ್ರಭು ಸೂರಿ ಜೊತೆ ವಿಚಾರವಿನಿಮಯ ಮಾಡಿದನು*
65)" ವೈಪರೀತ್ಯಗಳ ಸಮ್ಮಿಶ್ರಣ ದೊರೆಯೆಂದು" ಯಾರನ್ನು ಕರೆಯುತ್ತಾರೆ?
*ಮಹಮ್ಮದ್ ಬಿನ್ ತುಘಲಕ್*
66)" ಹಿಂದೂ ತಾಯಿಯ ಮಗನಾಗಿದ್ದರೂ ಹಿಂದೂ ವಿರೋಧ ನೀತಿಯನ್ನು ಅನುಸರಿಸಿದ" ಮೊಟ್ಟ ಮೊದಲ ದೆಹಲಿ ಸುಲ್ತಾನ ಯಾರು?
*ಫಿರೋಜ್ ಷಾ ತುಘಲಕ್*
67)"ಅತಿ ಹೆಚ್ಚು ಗುಲಾಮರನ್ನು" ಹೊಂದಿದ್ದ ದೆಹಲಿ ಸುಲ್ತಾನ ಯಾರು?
*ಫಿರೋಜ್ ಷಾ ತುಘಲಕ್*( ಒಂದು ಲಕ್ಷದ ಎಂಬತ್ತು ಸಾವಿರ ಗುಲಾಮರು)
68)"ನಗರಗಳ ನಿರ್ಮಾಪಕ" ರಾಜ ಎಂದು ಯಾರನ್ನು ಕರೆಯುತ್ತಾರೆ?
*ಫಿರೋಜ್ ಷಾ ತುಘಲಕ್*
69)ಭಾರತೀಯ ಮುಸ್ಲಿ0 ರನ್ನು ಆಡಳಿತದಲ್ಲಿ ನೇಮಿಸಿಕೊಂಡ ಮೊದಲ ಬೇರೆ ಸುಲ್ತಾನ ಯಾರು?
*ಫಿರೋಜ್ ಷಾ ತುಘಲಕ್*
70)"ಕಾಲುವೆಗಳ ನಿರ್ಮಾಪಕ ರಾಜ" ಎಂದು ಯಾರನ್ನು ಕರಿತಾರೆ?
*ಫಿರೋಜ ಷಾ ತುಘಲಕ್*
71)ನಾಣ್ಯಗಳ ಮೇಲೆ "ಸುಲ್ತಾನ್ ಸುಲ್ತಾನ್ ಬಲಗೈ" ಎಂದು ಮುದ್ರಿಸಿದ ದೆಹಲಿ ಸುಲ್ತಾನ ಯಾರು?
*ಫಿರೋಜ್ ಷಾ ತುಘಲಕ್*
72) "ತನ್ನ ಆತ್ಮಚರಿತ್ರೆಯನ್ನು ತಾನೆ "ಬರೆದುಕೊಂಡ ಮೊಟ್ಟಮೊದಲ ದೆಹಲಿ ಸುಲ್ತಾನ ಯಾರು?
*ಫಿರೋಜ್ ಷಾ ತುಘಲಕ್*
( "ಪತ್ವತ್-ಐ-ಫಿರೋಜ್ ಷಾಹಿ")
73)ಇಡೀ ವಿಶ್ವವನ್ನೇ "ಮುಸ್ಲಿಂ ರಾಷ್ಟ್ರವನ್ನಾಗಿ" ಸಬೇಕೆಂದು ಹೇಳಿದವರು ಯಾರು?
*ತೈಮೂರ್*
74)"1ಲಕ್ಷ ಹಿಂದುಗಳನ್ನು ಕೊಲೆ" ಮಾಡಿದವರಾರು?
*ತೈಮೂರ್*
74) ಮಧ್ಯಯುಗಿನ ಭಾರತ ಇತಿಹಾಸದಲ್ಲಿ ದೆಹಲಿಯನ್ನು ಆಳಿದ ಹಏಕೈಕ ಹಿಂದು ವ್ಯಕ್ತಿ?
*ಹೇಮು*
75) ಮಧ್ಯಯುಗಿನ ಭಾರತ ಇತಿಹಾಸದಲ್ಲಿ "ಒಂದೇ ದಿನ ದೆಹಲಿ ಸಿಂಹಾಸನ" ಏರಿದ ಏಕೈಕ ವ್ಯಕ್ತಿ?
*ಜಲಗಾರ ನಿಜಾಮ*
No comments:
Post a Comment