ಉತ್ತರಕಾಂಡ ಸಿಎಂ 'ತ್ರಿವೇಂದ್ರ ಸಿಂಗ್ ರಾವತ್'ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
ಉತ್ತರಾಖಂಡ್ : ರಾಜ್ಯದಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಪೋಟಗೊಂಡಿದೆ. ನಿನ್ನೆ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯ ಬಳಿಕ, ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿರುವಂತ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಉತ್ತರಾಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಭಾರತೀಯ ಜನತಾ ಪಕ್ಷದ ನಾಯಕ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. 2017ರ ಆರಂಭದಲ್ಲಿ ಬಿಜೆಪಿ ಗೆಲುವು ಪಡೆದ ನಂತರ ಸಿಎಂ ಆದ ರಾವತ್, ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ.
ರಾವತ್ ಅವರು ತಮ್ಮ 'ಆಡಳಿತ ವೈಖರಿ' ಬಗ್ಗೆ ಉತ್ತರಾಖಂಡ್ ನ ಬಿಜೆಪಿ ಶಾಸಕರ ಒಂದು ವರ್ಗದೂರು ಗಳ ನಡುವೆ ದೆಹಲಿಯಲ್ಲಿ ಸೋಮವಾರ ಬಿಜೆಪಿ ಹಿರಿಯ ನಾಯಕರನ್ನು ಭೇಟಿ ಮಾಡಿದರು.
No comments:
Post a Comment