ಚೋಳರು ಮತ್ತು ದ್ವಾರಸಮುದ್ರದ ಹೊಯ್ಸಳರು
ಬಗ್ಗೆ ಸಂಕ್ಷಿಪ್ತ ಮಾಹಿತಿ
ಚೋಳರು (ಸಾ.ಶ. 850 - 1279)
ಇವರು ತಮಿಳುನಾಡಿನ ಪಲ್ಲವರ ನಂತರ ದಕ್ಷಿಣದಲ್ಲಿ 9ನೇ ಶತಮಾನದಿಂದ 13ನೆಯ ಶತಮಾನದವರೆಗೆ ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದ ಅನೇಕ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ, ಭಾರತೀಯ ಸಂಸ್ಕøತಿಯು ವಿದೇಶಗಳಲ್ಲಿ ಹರಡಲು ಕಾರಣವಾದರು.
ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ‘ಬೃಹದೀಶ್ವರ’ ದೇವಾಲಯ ಇವರ ಕೊಡುಗೆ.
ತಮಿಳು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿ ಪ್ರಸಿದ್ಧರಾದರು. ಚೋಳರು ಪಲ್ಲವರ ಆಶ್ರಯದಲ್ಲಿದ್ದು, ಆನಂತರ ಸ್ವತಂತ್ರರಾದವರು. ಸಂಗಮ್ ಸಾಹಿತ್ಯದ ಪ್ರಕಾರ ಕರಿಕಾಲ ಚೋಳನು ಈ ವಂಶದ ಮೂಲಪುರುಷ.
ವಿಜಯಾಲಯ ಚೋಳ ರಾಜ್ಯವನ್ನು ಪುನರುಜ್ಜೀವನಗೊಳಿಸಿ ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು. ಚೋಳರ ಪ್ರಮುಖ ರಾಜ ಒಂದನೆಯ ರಾಜರಾಜ. ಶೂರ, ಶ್ರೇಷ್ಠ ಯೋಧ ಹಾಗೂ ದಕ್ಷ ಆಡಳಿತಗಾರನಾಗಿದ್ದನು.
ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. ಚೇರರನ್ನು, ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು.
ನೌಕಾ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು. ಮಲೇಶಿಯಾ, ಸಿಂಗಪುರಗಳಲ್ಲಿ ಇಂದಿಗೂ ತಮಿಳರ ಪ್ರಾಬಲ್ಯವನ್ನು ಗಮನಿಸಬಹುದು.
ಅಲ್ಲದೆ ಅವರು ರಾಜಕೀಯ, ಆರ್ಥಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪ್ರಭಾವಶಾಲಿಗಳಾಗಿರುವುದನ್ನು ನೀವು ಗಮನಿಸಬಹುದು.
ಈ ಮೂಲಕ ಸಾಗರೋತ್ತರ ವಾಣಿಜ್ಯ ವ್ಯವಹಾರಗಳನ್ನು ಪ್ರಾರಂಭಿಸಿ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಈತನು ಕಟ್ಟಿದ ತಂಜಾವೂರಿನ ಬೃಹದೀಶ್ವರ ದೇವಾಲಯವು ಅತ್ಯಂತ ಪ್ರಸಿದ್ಧವಾದುದು.
ಮೂರನೆಯ ರಾಜೇಂದ್ರನ ಕಾಲದಲ್ಲಿ ಚೋಳ ರಾಜ್ಯವು ಕ್ಷೀಣಿಸಿ, ಪಾಂಡ್ಯರು ಮೇಲುಗೈ ಸಾಧಿಸಿದರು.
ಚೋಳರ ಕೊಡುಗೆಗಳು
ಚೋಳರು ಉತ್ತಮವಾದ ಹಾಗೂ ದಕ್ಷ ಆಡಳಿತ ವ್ಯವಸ್ಥೆಯನ್ನು ತಮ್ಮ ರಾಜ್ಯದಲ್ಲಿ ಏರ್ಪಡಿಸಿದ್ದರು. ರಾಜ್ಯವನ್ನು ಮಂಡಲಂ, ಕೊಟ್ವಂಗಿ, ನಾಡು, ಕುರ್ರಂ ಅಥವಾ ಗ್ರಾಮ ಸಮುದಾಯ ಹಾಗೂ ತರ-ಕುರಂ ಎಂದು ವಿಭಾಗಿಸಲಾಗಿತ್ತು.
ಪ್ರತಿ ಗ್ರಾಮದಲ್ಲೂ ‘ಊರ್’ ಎಂಬ ಪ್ರಜೆಗಳ ಸಭೆ ಇತ್ತು. ಚೋಳರ ಆಳ್ವಿಕೆಯ ಪ್ರಮುಖ ಲಕ್ಷಣವೆಂದರೆ ಗ್ರಾಮದ ಸ್ವಯಮಾಧಿಪತ್ಯದ ಬೆಳವಣಿಗೆ. ಗ್ರಾಮ ಸಭೆಗಳು ಪ್ರಥಮ ಸಭೆಗಳಾಗಿದ್ದವು. ತರ-ಕುರ್ರಂ ಒಂದು ಹಳ್ಳಿ.
ಪ್ರತಿ ಕುರ್ರಂಗೂ ‘ಮಹಾಸಭಾ’ ಎನ್ನುವ ಗ್ರಾಮಸಭೆ ಇದ್ದಿತು. ಇದನ್ನು ‘ಪೆರುಂಗುರಿ’ ಎಂದು, ಅದರ ಸದಸ್ಯರನ್ನು ‘ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು. ಸದಸ್ಯರನ್ನು ಚುನಾವಣೆ ಮೂಲಕ ಆರಿಸಲಾಗುತ್ತಿತ್ತು.
ಸಂಸ್ಕøತ ವಿದ್ವಾಂಸರು ಹಾಗೂ ಶ್ರೀಮಂತರು ಮಾತ್ರ ಈ ಚುನಾವಣೆಗೆ ಅರ್ಹರಾಗಿದ್ದರು. ಭೂ ಆದಾಯದ ಆರನೆಯ ಒಂದು ಭಾಗವನ್ನು ಕಂದಾಯವನ್ನಾಗಿ ವಸೂಲಿ ಮಾಡುತ್ತಿದ್ದರು.
ನೀರಾವರಿ ವ್ಯವಸ್ಥೆಗೆ ವಿಶೇಷ ಗಮನ ಕೊಟ್ಟಿದ್ದರು. ಅನೇಕ ಕೆರೆಗಳನ್ನು ಕಟ್ಟಿಸಿದ್ದರು. ಬೆಂಗಳೂರು ಬಳಿಯ ಬೆಳ್ಳಂದೂರು ಕೆರೆ ಇವರ ರಚನೆಯಾಗಿದೆ.
ಗಂಗೈಕೊಂಡ ಚೋಳಪುರದಲ್ಲಿ ಒಂದು ವಿಶಾಲ ಸರೋವರವನ್ನು ಕಟ್ಟಿಸಿದರು. ಚೋಳರು ಶೈವರಾಗಿದ್ದು, ಇವರು ಅನೇಕ ಶಿವಾಲಯಗಳನ್ನು ಕಟ್ಟಿಸಿದರು.
ತಂಜಾವೂರಿನ ಬೃಹದೀಶ್ವರ ಮಂದಿರ 500 ಅಡಿ ಉದ್ದ, 250 ಅಡಿ ಅಗಲದ ವಿಶಾಲ ಪ್ರಾಕಾರದಲ್ಲಿದೆ. ಅದರ ಶಿಖರ 200 ಅಡಿ ಎತ್ತರವಾಗಿದೆ.
ರಾಜೇಂದ್ರನು ಕಟ್ಟಿಸಿದ ಚೋಳೇಶ್ವರ (ಗಂಗೈಕೊಂಡ ಚೋಳಪುರ), ಚನ್ನಪಟ್ಟಣ ಹತ್ತಿರದ ಅಪ್ರಮೇಯ, ಬೆಂಗಳೂರು ಬಳಿ ಬೇಗೂರಿನ ಚೋಳೇಶ್ವರ, ಬಿನ್ನಮಂಗಲದ ಮುಕ್ತೇಶ್ವರ ಕರ್ನಾಟಕದಲ್ಲಿನ ಇವರ ದೇವಾಲಯಗಳಾಗಿವೆ.
ದೇವಾಲಯಗಳು ಆರ್ಥಿಕ, ಸಾಂಸ್ಕøತಿಕ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು. ಇವರ ಕಾಲದಲ್ಲಿನ ಶಿವ, ಗಣಪತಿ, ವಿಷ್ಣು, ದುರ್ಗೆ, ಕಾರ್ತಿಕೇಯರ ಮೂರ್ತಿಗಳು ಪ್ರಸಿದ್ಧವಾದವು. ಚೋಳರು ವಿದ್ಯೆಗೆ ಪ್ರೋತ್ಸಾಹ ನೀಡಲು ಅನೇಕ ಅಗ್ರಹಾರಗಳನ್ನು ಸ್ಥಾಪಿಸಿದರು.
ಉತ್ತರ ಮೇರೂರು ಅಗ್ರಹಾರ ಇದರಲ್ಲಿ ಪ್ರಸಿದ್ಧವಾದದು. ದೇವಾಲಯಗಳು ವಿದ್ಯಾಕೇಂದ್ರಗಳಾಗಿದ್ದವು. ಇವು ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದವು.
ತಮಿಳು ಸಾಹಿತ್ಯದ ಸರ್ವತೋಮುಖ ಪ್ರಗತಿಯ ಕಾಲವಿದು. ಕಂಬ ರಚಿಸಿದ ರಾಮಾಯಣ, ಸೆಕ್ಕಿಲರ್ ರಚಿಸಿದ ಪೆರಿಯ ಪುರಾಣ, ತಿರುಕ್ಕಾದೇವನ ಜೀವಕ ಚಿಂತಾಮಣಿ ಮುಂತಾದವುಗಳು ಪ್ರಮುಖವಾಗಿವೆ.
ದ್ವಾರಸಮುದ್ರದ ಹೊಯ್ಸಳರು (ಸಾ.ಶ. 984 - ಸಾ.ಶ. 1346)
ಚಾಲುಕ್ಯರು ಕ್ಷೀಣಿಸಿದ ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಸೊಸೆವೂರು (ಈಗಿನ ಅಂಗಡಿ) ಹಳ್ಳಿಯ ಬಳಿ ಈ ಮನೆತನದ ಮೂಲ ಪುರುಷ ಸಳನು ಜೈನಮುನಿಯಾದ ಸುದತ್ತ ಮುನಿಯ ಆದೇಶದಂತೆ ಹುಲಿಯೊಡನೆ ಕಾದಾಡಿ ಅದನ್ನು ಕೊಂದು ‘ಹೊಯ್ಸಳ’ ಎನಿಸಿಕೊಂಡು ಈ ವಂಶದ ಸ್ಥಾಪಕನಾದನು.
ಇವರು ಸಾಹಿತ್ಯ, ಶಿಕ್ಷಣ, ಕಲೆ ಮತ್ತು ವಾಸ್ತುಶಿಲ್ಪ, ನೀರಾವರಿ ಇವೆಲ್ಲಕ್ಕೂ ವಿಶೇಷವಾಗಿ ಕೊಡುಗೆ ನೀಡಿದವರು.
ಹೊಯ್ಸಳರ ಕೊಡುಗೆಗಳು
ನೃಪಕಾಮ, ಎರೆಯಂಗ, ಬಲ್ಲಾಳರ ನಂತರ ಹೊಯ್ಸಳರ ಪ್ರಮುಖ ರಾಜನಾದವನು ವಿಷ್ಣುವರ್ಧನ. ಈ ವಂಶದ ಶ್ರೇಷ್ಠ ದೊರೆಯಾದ ಈತನು ಚೋಳರಿಂದ ಗಂಗವಾಡಿಯನ್ನು ಗೆದ್ದು ‘ತಲಕಾಡುಗೊಂಡ’ ಎಂಬ ಬಿರುದು ಪಡೆದನು.
ಈ ವಿಜಯದ ನೆನಪಿಗಾಗಿ ತಲಕಾಡಿನಲ್ಲಿ ಕೀರ್ತಿನಾರಾಯಣ ದೇವಾಲಯವನ್ನು ಹಾಗೂ ಬೇಲೂರಿನ ಚೆನ್ನಕೇಶವ (ವಿಜಯ ನಾರಾಯಣ) ದೇವಾಲಯವನ್ನು ಕಟ್ಟಿಸಿದನು.
ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸಿ ಚಾಲುಕ್ಯರ 6ನೇ ವಿಕ್ರಮಾದಿತ್ಯನಿಂದ ಸೋತನು.
ರಾಮಾನುಜಾಚಾರ್ಯರು ತಮ್ಮ ವಿಶಿಷ್ಟಾಧ್ಯತಾ ತತ್ವವನ್ನು ಚೋಳ ರಾಜ್ಯದಲ್ಲಿ ಪ್ರಚಾರ ಮಾಡಲಾಗದೇ ಬಿಟ್ಟಿದೇವನ (ವಿಷ್ಣುವರ್ಧನ) ಆಶ್ರಯದಲ್ಲಿ ಬಂದು ನೆಲೆ ನಿಂತು ಕರ್ನಾಟಕದಾದ್ಯಂತ ಪ್ರಚಾರ ಮಾಡಿದರು.
ಮೂರನೇ ಬಲ್ಲಾಳನ ಕಾಲದಲ್ಲಿ ಈ ರಾಜ್ಯವು ಕ್ಷೀಣಿಸಿತು. ಇದೇ ವೇಳೆಯಲ್ಲೇ ವಿಜಯನಗರ ಸಾಮ್ರಾಜ್ಯವು ಅಧಿಕಾರಕ್ಕೆ ಬಂದಿತು.
ಹೊಯ್ಸಳರು ಪ್ರಾಂತಾಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. ಆಡಳಿತವನ್ನು ಯುವರಾಜ, ರಾಣಿ ಮತ್ತು ಅರಸುಮನೆತನದವರಿಗೆ ಕೊಡಲಾಗುತ್ತಿತ್ತು.
ನಾಡು ಮತ್ತು ವಿಷಯಗಳ ಆಡಳಿತವನ್ನು ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಗೌಡ, ಶಾನುಭೋಗ, ತಳವಾರ ಮುಂತಾದ ಸರಕಾರದ ಪ್ರತಿನಿಧಿಗಳಿರುತ್ತಿದ್ದರು.
ಕೃಷಿಗೆ ಬೆಂಬಲ ಸೂಚಿಸುವ ಸಲುವಾಗಿ ಹೊಯ್ಸಳರು ಶಾಂತಿಸಾಗರ, ಬಲ್ಲಾಳರಾಯ ಸಮುದ್ರ, ವಿಷ್ಣು ಸಮುದ್ರ ಮುಂತಾದ ನೂರಾರು ಕೆರೆಗಳನ್ನು ಕಟ್ಟಿಸಿದರು.
ಪಟ್ಟಣಗಳಲ್ಲಿ ಕಸುಬುದಾರರ, ವೈಣಿಕರ ಶ್ರೇಣಿಗಳಿದ್ದವು. ಭೂಕಂದಾಯವು ರಾಜ್ಯದ ಬಹುಮುಖ್ಯ ಆದಾಯವಾಗಿತ್ತು. ಸಮಾಜದ ವೈಶಿಷ್ಟಯತೆ ಎಂದರೆ ಅರಸನಿಗೆ ‘ಗರುಡ’ರೆಂಬ ವಿಶೇಷ ಅಂಗರಕ್ಷಕ ದಳವಿರುತ್ತಿತ್ತು.
ಅವರು ರಾಜನು ಮರಣ ಹೊಂದಿದಾಗ ತಾವೂ ಪ್ರಾಣತ್ಯಾಗ ಮಾಡುತ್ತಿದ್ದರು. ಹೊಯ್ಸಳರ ಕಾಲದಲ್ಲಿ ಜೈನ, ಬೌದ್ಧ, ಶೈವ, ವೈಷ್ಣವ, ವೀರಶೈವ, ಶ್ರೀ ವೈಷ್ಣವ ಮತಗಳು ಪ್ರಚಲಿತವಾಗಿದ್ದವು ಅಗ್ರಹಾರಗಳು, ಮಠಗಳು, ದೇವಾಲಯಗಳು ಶಿಕ್ಷಣದ ಕೇಂದ್ರಗಳಾಗಿದ್ದವು.
ಮೇಲುಕೋಟೆ, ಸಾಲಗಾಮೆ, ಅರಸೀಕೆರೆ ಮುಂತಾದವು ಗಣ್ಯ ಶಿಕ್ಷಣ ಕೇಂದ್ರಗಳಾಗಿದ್ದವು. ವೇದ, ವೇದಶಾಸ್ತ್ರ, ಕನ್ನಡ, ಸಂಸ್ಕøತಗಳ ಅಧ್ಯಯನವು ನಡೆಯುತ್ತಿತ್ತು.
ಕನ್ನಡ ಸಾಹಿತ್ಯವು ವಿಪುಲವಾಗಿ ಬೆಳೆಯಿತು. ರುದ್ರಭಟ್ಟನು ‘ಜಗನ್ನಾಥ ವಿಜಯ’ವನ್ನು ಕವಿಚಕ್ರವರ್ತಿ ಜನ್ನನು ‘ಯಶೋಧರ ಚರಿತೆ’ಯನ್ನು, ಹರಿಹರನು ‘ಗಿರಿಜಾ ಕಲ್ಯಾಣ’ ಎಂಬ ಚಂಪೂಕಾವ್ಯವನ್ನು, ರಾಘವಾಂಕನು ‘ಹರಿಶ್ಚಂದ್ರ ಕಾವ್ಯ’ ಹಾಗೂ ಕೇಶೀರಾಜನು ‘ಶಬ್ದಮಣಿ ದರ್ಪಣ’ವನ್ನು ರಚಿಸಿದ್ದಾರೆ.
ಸಂಸ್ಕøತದಲ್ಲೂ ರಾಮಾನುಜಾಚಾರ್ಯರ ಶ್ರೀಭಾಷ್ಯ, ಪರಾಶರಭಟ್ಟರ ಶ್ರೀ ಗುಣ ರತ್ನಕೋಶ ಮುಂತಾದವುಗಳು ರಚಿತವಾದವು.
ಹೊಯ್ಸಳರ ಶಿಲ್ಪಕಲೆ ಜಗದ್ವಿಖ್ಯಾತವಾದುದು. ಬಳಪದ ಮೃದು ಕಲ್ಲಿನಿಂದ ಹೊಯ್ಸಳರು ಅಸಂಖ್ಯಾತ ದೇವಾಲಯಗಳನ್ನು ರಚಿಸಿದರು. ಇವರ ದೇವಾಲಯಗಳಲ್ಲಿ ನಕ್ಷತ್ರಾಕಾರದ ಗರ್ಭಗೃಹ, ಉಪಪೀಠ (ಜಗತಿ), ಭಿತ್ತಿ ಅಲಂಕರಣ, ಶಿಖರ ಹಾಗೂ ಕಂಬಗಳೆಂಬ ಐದು ಲಕ್ಷಣಗಳನ್ನು ನೋಡಬಹುದು.
ಬೇಲೂರಿನ ಚೆನ್ನಕೇಶವ ದೇವಾಲಯದ ಕಂಬಗಳ ಚಾಚುಪೀಠಗಳಲ್ಲಿ ಸುಂದರ ಮದನಿಕೆಯರ ವಿಗ್ರಹಗಳಿವೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ದಂಡನಾಯಕ ಕೇತಮಲ್ಲನು ಕಟ್ಟಿಸಿದನು.
ಸೋಮದಂಡ ನಾಯಕನು ಕಟ್ಟಿಸಿದ ಸೋಮನಾಥಪುರದ ಕೇಶವ ದೇವಾಲಯವು ಪ್ರಸಿದ್ಧವಾದುದು. ಇದಲ್ಲದೆ ತಲಕಾಡು, ಅರಸೀಕೆರೆ, ಗೋವಿಂದನಹಳ್ಳಿ, ದೊಡ್ಡಗದ್ದವಳ್ಳಿ, ಭದ್ರಾವತಿ, ಶ್ರವಣಬೆಳಗೊಳ ಮುಂತಾದೆಡೆ ಅನೇಕ ದೇವಾಲಯಗಳೂ, ಬಸದಿಗಳೂ ಇವೆ.
ಇವೆಲ್ಲವೂ ಅತಿ ಸೂಕ್ಷ್ಮ ಕುಸುರಿ ಕೆತ್ತನೆಗೆ ಹೆಸರುವಾಸಿಯಾಗಿವೆ. ವಾ ಬೀರಿವೆ. ಹೊಯ್ಸಳರ ಕಾಲದಲ್ಲಿ ದಾಸೋಜ, ಚಾವಣ, ಜಕಣ, ಮಲ್ಲತಮ್ಮ, ಕೇದಾರೋಜ ಮುಂತಾದ ಖ್ಯಾತ ಶಿಲ್ಪಿಗಳನ್ನು ಹೆಸರಿಸಬಹುದು
No comments:
Post a Comment