Wednesday 3 February 2021

History notes

  MahitiVedike Com       Wednesday 3 February 2021

               ನೋಟ್
====================
 ಯರ್ರಿಗುಡಿ ಶಿಲಾಶಾಸನವನ್ನು ಕಂಡುಹಿಡಿದವರು
- *ಅನುಘೋಷ್*

 ಮಸ್ಕಿ ಶಾಸನವನ್ನು 1915 ಜನವರಿಯಲ್ಲಿ ಕಂಡುಹಿಡಿದವರು - *ಸಿ .ಬೀಡ್* 

 ಬ್ರಹ್ಮಗಿರಿ , ಸಿದ್ಧಾಪುರ , ಜತಿಂಗ ರಾಮೇಶ್ವರ ಶಿಲಾಶಾಸನಗಳನ್ನು 1892 ರಲ್ಲಿ ಕಂಡುಹಿಡಿದವರು - 
*ಬಿ . ಎಲ್ . ರೈಸ್* 

 1931 ರಲ್ಲಿ ಎನ್ . ಬಿ . ಶಾಸ್ತ್ರಿಯವರು ಕಂಡುಹಿಡಿದ ಶಾಸನಗಳು
*ಕೊಪ್ಪಳದ ಗವಿಮಠ ಮತ್ತು ಪಾಲ್ಕಿಗುಂಡು ಶಿಲಾಶಾಸನಗಳು*

 ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಶಿಲಾಶಾಸನ
- *ರಜುಲ ಮಂಡಗಿರಿ ಶಿಲಾಶಾಸನ*

 'ದೇವನಾಂಪ್ರಿಯಸ ಪ್ರಿಯದರ್ಶನೋ ಅಶೋಕ ರಾಜಸ ' ಎಂದು  ಅಶೋಕನ ಪೂರ್ಣ ಹೆಸರು , ಬಿರುದು ಎಲ್ಲವನ್ನೂ ಒಳಗೊಂಡ   ಏಕೈಕ ಶಿಲಾಶಾಸನ 
- *ಗುಜರ್ರಾ ಶಿಲಾಶಾಸನ*

 ಭಾರತದ ಮೇಲೆ ದಾಳಿಯಿಟ್ಟ ಪ್ರಥಮ ವಿದೇಶಿಯರು
-  *ಪರ್ಷಿಯನ್ನರು ನಂತರ ಮ್ಯಾಸಿಡೋನಿಯನ್ನರು* 

 ಕ್ರರ್ ಕ್ಸಸ್ ನ ಕಾಲದ ಸೈನ್ಯದಲ್ಲಿ ಗ್ರೀಕ್‌ರ ವಿರುದ್ಧ ಹೋರಾಡುತ್ತಿದ್ದ ಬಹು ಸಂಖ್ಯಾತ ಭಾರತೀಯ ಸೈನಿಕರನ್ನು ಹೀಗೆ ಕರೆಯುತ್ತಿದ್ದರು
 - *ಗಾಂಧಾರಿಯನ್ನರು* 

 ಮ್ಯಾಸಿಡೋನಿಯಾವು ಇವರ ನಾಯಕತ್ವದಲ್ಲಿ ಪ್ರಾಬಲ್ಯಕ್ಕೆ ಬಂದಿತ್ತು 
-  *ಎರಡನೇ ಫಿಲಿಪ್*

 ಎರಡನೇ ಫಿಲಿಪ್ಪನ ನಂತರ ಅಧಿಕಾರಕ್ಕೆ ಬಂದವನು - *ಅಲೆಕ್ಸಾಂಡರ್* '

 ಅಲೆಕ್ಸಾಂಡರ್‌ನು ಇವರ ಶಿಷ್ಯನಾಗಿದ್ದನು 
- *ಅರಿಸ್ಟಾಟಲ್* 

 ಅಲೆಕ್ಸಾಂಡರ್‌ನು ಬಹುವಾಗಿ ಪ್ರೀತಿಸುತ್ತಿದ್ದ ವಸ್ತುಗಳು 
- *ಖಡ್ಗ ಮತ್ತು ಹೋಮರನ ' ಈಲಿಯಡ್ ' ಕಾವ್ಯ*

 ಅಲೆಕ್ಸಾಂಡರ್‌ನು ಭಾರತಕ್ಕೆ ಬಂದಾಗ ಅಸ್ತಿತ್ವದಲ್ಲಿದ್ದ ಪ್ರಮುಖ ರಾಜ್ಯಗಳು
-  *ಅಸ್ಪಾಷಿಯನ್ , ಅಭಿಸಾರ , ಅಗಲಸೈ , ಅಭಸ್ತನೈ , ಮೌಸಿಕನ್ನರು , ಮಲ್ಲಾಯ್ , ಸೊಫೈಟ ಸಾಮ್ರಾಜ್ಯ , ನ್ಯಾಸ , ತಕ್ಷಶಿಲೆಯ ಅಂಬಿ* , ಪೋರಸ್‌ನ ಸಾಮ್ರಾಜ್ಯ ಇನ್ನೂ ಮುಂತಾದವು....

 ಅಲೆಕ್ಸಾಂಡರ್‌ನು ಪಂಜಾಬ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದನು
-  *ಫಿಲಿಪ್ಪನನ್ನು*

 ಅಲೆಕ್ಸಾಂಡರ್‌ನು ಸಿಂದ್ ಪ್ರಾಂತ್ಯಕ್ಕೆ ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದನು 
- *ಫೈಥಾನ್‌ನನ್ನು*

 ಪಂಜಾಬಿನ ಉತ್ತರದ ಭಾಗಗಳನ್ನು ಅಲೆಕ್ಸಾಂಡರ್‌ನು ಇವರಿಗೆ ಬಿಟ್ಟು ಕೊಟ್ಟನು 
- *ಅಂಬಿ ಮತ್ತು ಪೌರವನಿಗೆ*

 ಮೌರ್ಯ ಸಾಮ್ರಾಜ್ಯದ ಸ್ಥಾಪಕ 
- *ಚಂದ್ರಗುಪ್ತ ಮೌರ್ಯ* 

 ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದದ್ದು
-  *ಕ್ರಿ.ಪೂ. 321*

 ಚಂದ್ರಗುಪ್ತ ಮೌರ್ಯನ ಅಧಿಕಾರದ ಅವಧಿ 
-  *ಕ್ರಿ.ಪೂ. 322-298* 

 ಮೌರ್ಯ ಸಾಮ್ರಾಜ್ಯದ ರಾಜಧಾನಿ 
- *ಪಾಟಲೀಪುತ್ರ*

 ಬುದ್ಧನು ಬೋಧಿಸಿದ ಅಷ್ಟಾಂಗ ಮಾರ್ಗಗಳನ್ನು ಹೀಗೆ ಕರೆಯುವರು 
- *ಮಧ್ಯ ಮಾರ್ಗಗಳೆಂದು* 

 ಬೌದ್ಧ ಸನ್ಯಾಸಿಗಳು , ಸನ್ಯಾಸಿನಿಯರು ಇದ್ದ ಗುಂಪಿನ ವರ್ಗಕ್ಕೆ ಬುದ್ಧನು ಹೆಸರಿಸಿದ್ದು
 - *ಸಂಘವೆಂದು* 

 ಬುದ್ಧನ ಅನುಯಾಯಿಗಳು ಕೈಗೊಳ್ಳಬೇಕಾದ ದೀಕ್ಷೆಗಳು 
- *ಪಬ್ಬಜ್ಞಾ ಮತ್ತು ಉಪ ಸಂಪದಾ*

 ಬೌದ್ಧ ಭಿಕ್ಷು ಸಂಘಗಳ ನಡವಳಿಕೆಯ ನಿಯಮಗಳಿಗೆ ಸಂಬಂಧಿಸಿದ ಶಿಸ್ತನ್ನು ಬೋಧಿಸುವುದು
 - *ವಿನಯ ಪಿಟಕ* 

 ಪತಿ - ಮೊಕ್ಕ ಎಂಬ ಗ್ರಂಥ ಒಳಗೊಂಡಿರುವ ನಿಯಮಗಳು - *227*

  ಬೌದ್ಧ ಸಂಘದಲ್ಲಿ ಸ್ತ್ರೀಯರಿಗೂ ಪ್ರವೇಶವಿರಬೇಕೆಂದು ಪ್ರತಿಪಾದಿಸಿದವರು
 - *ಆನಂದ* 

 ಮೊದಲಿನ ಬೌದ್ಧ ಧರ್ಮದ ಪ್ರಸಿದ್ಧ ಸಪ್ತ ಸ್ತ್ರೀಯರೆಂದರೆ 
- *ಖೇಮ , ಉಪ್ಪಾಲವನ್ನ , ಪಟಚಾರ , ಭದ್ದ - ಕುಂಡಲ ಕೇಶ , ಕಿಸಾಗೌತಮಿ , ಧಮ್ಮದಿನ್ನ ಮತ್ತು ವಿಶಾಖಾ*

 ಬುದ್ಧನ ಸಾಮಾನ್ಯ ಶಿಷ್ಯರಲ್ಲಿ ಪ್ರಸಿದ್ಧರಾದವರು
- *ಶ್ರಾವಸ್ತಿಯ ಅನಾತ್ಥ ಪಿಂಡಕ*

 ಬುದ್ಧನ ಮತ್ತೊಬ್ಬ ಪ್ರಸಿದ್ಧ ಶಿಷ್ಠೆಯೆಂದರೆ
 - *ವಿಶಾಖಾ* 

 ಭಾರತದ ಮಟ್ಟಿಗೆ ಅಥವಾ ವಿಶ್ವದಲ್ಲೇ ಧಾರ್ಮಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಪ್ರಥಮವಾಗಿ ಸ್ಥಾಪಿಸಿದ ಸಂಘ
 - *ಬೌದ್ಧರ ಸಂಘ* 

 ಬೌದ್ಧ ಧರ್ಮದ ತತ್ವಗಳನ್ನು ಗ್ರಂಥರೂಪದಲ್ಲಿ ಸಂಗ್ರಹಿಸಲಾದ ಸಭೆ
-  *ನಾಲ್ಕನೇ ಬೌದ್ಧ ಮಹಾಸಭೆ*

  ಒಂದೇ ಸಮಾಧಿ ಗುಂಡಿಯಲ್ಲಿ ಏಕಕಾಲದಲ್ಲೇ ಇಬ್ಬರು ವ್ಯಕ್ತಿಗಳ ಶವಗಳನ್ನು ಹೂಳುತ್ತಿದ್ದ ವಿಶಿಷ್ಟ ಶವಸಂಸ್ಕಾರ ಪದ್ಧತಿ ಕಂಡುಬಂದ ನಗರ
 - *ಲೋಥಾಲ್* 

 ಸಿಂಧೂ ನಾಗರಿಕತೆಯ ಪ್ರಮುಖ ವಿದೇಶಿ ವ್ಯಾಪಾರ ಕೇಂದ್ರಗಳು 
- *ಲೋಥಾಲ್ , ಸುರ್ಕೋತ್ಟ ಮತ್ತು ಬಾಲ್‌ಕೋಟ್* 

 ಸಿಂಧೂ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹ 
- *ತಾಮ್ರ* 

 ಸಿಂಧೂ ನಾಗರಿಕತೆಯ ಜನರು ತಾಮ್ರವನ್ನು ಈ ಗಣಿಗಳಿಂದ ತರಿಸಿ ಕೊಳ್ಳುತ್ತಿದ್ದರು
 - *ರಾಜಸ್ಥಾನದ ಖೇತ್ರಿ ಗಣಿ ಮತ್ತು ಆಫ್ಘಾನಿಸ್ತಾನದ ಗಣಿಗಳು*.

  ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿರುವ ಸಿಂಧೂ ನಾಗರಿಕತೆಯ ನಗರ
 - *ಮೊಹೆಂಜೋದಾರೋ* 

 ಪಾಕಿಸ್ತಾನದ ಪಂಜಾಬಿನ ಮಾಂಟೆಗೊಮರಿ ಜಿಲ್ಲಾ ಕೇಂದ್ರದಿಂದ ಪಶ್ಚಿಮ ನೈರುತ್ಯಕ್ಕೆ ಸುಮಾರು 25 ಕಿ.ಮೀ. ದೂರದಲ್ಲಿರುವ ನಗರ 
- *ಹರಪ್ಪಾ* 

 ಕಾಲಿಬಂಗನ್ ನೆಲೆಯನ್ನು ಕಂಡುಹಿಡಿದ ವರ್ಷ 
 - *1953*

 ಗುಜರಾತ್‌ನ ಕಛ್ ಜಿಲ್ಲೆಯ ಬಚೌ ತಾಲೂಕಿನಲ್ಲಿರುವ ನಗರ 
- *ದೊಲವೀರ* 

 ದೋಲವೀರ ನಗರವನ್ನು ಶೋಧಿಸಿದವರು
 - *ಡಾ ಜೆ ಪಿ ಜೋಷಿ*

  2019-20 ನೇ ಸಾಲಿನ ರಣಜಿ ಟ್ರೋಫಿಯ ವಿಜೇತ ತಂಡ ? 
*ಸೌರಾಷ್ಟ್ರ ತಂಡ* 

 2021 ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡಕ್ಕೆ ಪ್ರಾಯೋಜಕತ್ವ ವಹಿಸಲಿರುವ ಸಂಸ್ಥೆ ?
-  *ಐನಾಕ್ಸ್ ಗ್ರೂಪ್* 

 ಪ್ರವಾಹ ಮೂನ್ಸೂಚನೆ ಉಪಕ್ರಮಗಳಿಗಾಗಿ ಭಾರತದ ಕೇಂದ್ರ ಜಲ ಆಯೋಗದೊಂದಿಗೆ ಕೈಜೋಡಿಸಿದ ಕಂಪನಿ
-  *ಗೂಗಲ್* 

 ಇತ್ತೀಚೆಗೆ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿದವರು ? 
-  *ಎಂ.ಎಸ್.ಮಹೇಂದ್ರಸಿಂಗ್ ಧೋನಿ ಮತ್ತು ಸುರೇಶ್ ರೈನಾ*

 ಇತ್ತೀಚೆಗೆ ನರೇಂದ್ರ ಮೋದಿಯವರು ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಪ್ರಾರಂಭಿಸುವುದಕ್ಕಾಗಿ ಘೋಷಣೆ ಮಾಡಿದ್ದು ಇದನ್ನು ಕಾರ್ಯಗತಗೊಳಿಸುವ ನೋಡಲ್ ಏಜೆನ್ಸಿ 
- *ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ* 

 ಇತ್ತೀಚೆಗೆ ಭಾರತ ಯಾವ ದೇಶದೊಂದಿಗೆ ಸಾಂಸ್ಕೃತಿಕ ಒಪ್ಪಂದಕ್ಕೆ ಸಹಿ ಹಾಕಿದೆ ?
 - *ಇಸ್ರೇಲ್* 

 ಖಾಸಗಿ ವಲಯದ ಕಂಪನಿ ಎಕನಾಮಿಕ್ ಎಕ್ಸ್ ಪೋಸಿವ್ಸ್ ಲಿಮಿಟೆಡ್ ಸಂಪೂರ್ಣವಾಗಿ ತಯಾರಿಸಿದ ಯಾವ ಮೊದಲ ರಾಕೆಟನ್ನು ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷಿಸಲಾಯಿತು ? 
- *ಪಿನಾಕಾ*

 ಯಾವ ಕುಬ್ಜ ಗ್ರಹಕ್ಕೆ ಸಂಶೋಧಕರು ಓಷನ್ ವರ್ಲ್ಡ್ ಸ್ಥಾನಮಾನ ನೀಡಿದರು ?
 - *ಸೆರೆಸ್*

 ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 
- *2030* 

 ಇತ್ತೀಚಿಗೆ ಮೋದಿಯವರು ಎಲ್ಲಿ ಸೌರ ವಿದ್ಯುತ್ ಯೋಜನೆಗೆ ಚಾಲನೆ ನೀಡಿದರು
-  *ಮಧ್ಯಪ್ರದೇಶ ರೇವಾ ಸೌರ್ ವಿದ್ಯುತ್ ಕೇಂದ್ರ* 

 ದೇಶದ ಅತೀ ಉದ್ದದ ಮತ್ತು ಸಮುದ್ರದ ಮೇಲೆ ನಿರ್ಮಾಣಗೊಂಡಿರುವ ದೇಶದ ಮೊದಲ ರೋಪ್ ವೇ ಎಲ್ಲಿದೆ ? 
- *ಮುಂಬೈ - ಎಲಿಫೆಂಟಾ ಗುಹೆ ನಡುವೆ* 

 ಜಮ್ಮು ಕಾಶ್ಮೀರದಲ್ಲಿ 
ಚಿನಾಬ್ ನದಿಗೆ ನಿರ್ಮಿಸಲಾಗುತ್ತಿರುವ ಜಗತ್ತಿನ ಎತ್ತರದ ರೈಲ್ವೇ ಸೇತುವೆ ಯಾವಾಗ ಪೂರ್ಣಗೊಳ್ಳಲಿದೆ ? 
- *2022*

 ಇತ್ತೀಚೆಗೆ ಅಧಿಕೃತವಾಗಿ ಗಿನ್ನಿಸ್ ದಾಖಲೆಗೆ ಸೇರಿದ ಮಾನವ ಕಂಪ್ಯೂಟರ್ ಎಂದು ಹೆಸರು ವಾಸಿಯಾದವರು ಯಾರು
-  *ಶಕುಂತಲಾದೇವಿ* 

 2020 ರ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮೋದಿಯವರು ಯಾವ ಅಭಿಯಾನಕ್ಕೆ ಚಾಲನೆ ನೀಡಿದರು 
- *ಕಸ ಮುಕ್ತ ಭಾರತ ಅಭಿಯಾನ*

10 ಸಾವಿರ ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಉದ್ದದ ಯಾವ ಸುರಂಗ ರಸ್ತೆಯನ್ನು ಮೋದಿ ಉದ್ಘಾಟಿಸಲಿದ್ದಾರೆ
 - *ರೋಹ್ವಾಂಗ್ ಸುರಂಗ ಮಾರ್ಗ*

 ಹೊಸ ಕಾಯ್ದೆ ಅನ್ವಯ ಆಂಧ್ರಪ್ರದೇಶದ 3 ರಾಜಧಾನಿಗಳು 
ಎ . *ವಿಶಾಖಪಟ್ಟಣಂ* - ಕಾರ್ಯಾಂಗ ರಾಜಧಾನಿ 
ಬಿ . *ಅಮರಾವತಿ* - ಶಾಸಕಾಂಗ ರಾಜಧಾನಿ
 ಸಿ . *ಕರ್ನೂಲ್* - ನ್ಯಾಯಾಂಗ ರಾಜಧಾನಿ

 ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನ
=================
ಜನವರಿ ತಿಂಗಳ ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶನ ಘೋಷಿಸಿದೆ. ಇದು ಈ ಪ್ರಶಸ್ತಿಗಾಗಿ ಘೋಷಿಸಲ್ಪಟ್ಟ ಮೊದಲ ನಾಮನಿರ್ದೇಶನ. ಅತ್ಯುತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ವರ್ಷದುದ್ದಕ್ಕೂ ಪುರುಷ-ಮಹಿಳೆಯರು ಇಬ್ಬರಿಗೂ ನೀಡಿ ಗೌರವಿಸಲಾಗುತ್ತದೆ, ಸಂಭ್ರಮಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.
=============
> ಇಂಗ್ಲೆಂಡ್ :-  *ನಾಯಕ ಜೋ ರೂಟ್*
> ಐರ್ಲೆಂಡ್‌ನ :- *ಪೌಲ್ ಸ್ಟಿರ್ಲಿಂಗ್*
> ಭಾರತದ :- *ರಿಷಭ್ ಪಂತ್*
=====================


 
logoblog

Thanks for reading History notes

Previous
« Prev Post

No comments:

Post a Comment